Advertisement

ಯೋಗಿ ರೋಡ್‌ ಶೋ: ಬಂಟ್ವಾಳದ ಕೇಸರಿ ಪಡೆಯಲ್ಲಿ ಹೊಸ ಸಂಚಲನ

06:15 PM May 07, 2023 | Team Udayavani |

ಬಂಟ್ವಾಳ: ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಪರ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ನಡೆಸಿದ ಬೃಹತ್‌ ರೋಡ್‌ ಶೋ ಬಂಟ್ವಾಳದ ಕೇಸರಿ ಪಡೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು-ಅಭಿಮಾನಿಗಳು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.

Advertisement

ರೋಡ್‌ ಶೋ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಕ್ಷೇತ್ರದ ಮೂಲೆ ಮೂಲೆಯಿಂದ ಕಾರ್ಯಕರ್ತರು ತಂಡೋಪತಂಡವಾಗಿ ಬಿ.ಸಿ.ರೋಡಿನತ್ತ ಆಗಮಿಸಿದರು. ರೋಡ್‌ ಶೋ ಆರಂಭಗೊಂಡ ಕೈಕಂಬದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೂ ಜನತೆ ರೋಡ್‌ ಶೋನಲ್ಲಿ ಪಾಲ್ಗೊಳ್ಳುವ ಜತೆಗೆ ಹೆದ್ದಾರಿ ಇಕ್ಕೆಲಗಳು, ಬಹುಮಹಡಿಯ ಕಟ್ಟಡಗಳ ಮುಂದೆ ನಿಂತು ಯೋಗಿಯತ್ತ ಕೈ ಬೀಸಿದರು. ಕಾರ್ಯಕರ್ತರು ತಮ್ಮ ಮೊಬೈಲ್‌ಗ‌ಳಲ್ಲಿ ವಿಡಿಯೋ, ಪೋಟೊಗಳನ್ನು ಕ್ಲಿಕ್ಕಿಸಿ ಯೋಗಿಯನ್ನು ಸಂಭ್ರಮೋತ್ಸಾಹದಿಂದ ಸ್ವಾಗತಿಸಿದರು.

ರೋಡ್‌ ಶೋ ಮುಕ್ತಾಯಗೊಂಡು ಯೋಗಿಯವರ ಮಾತಿಗೆ ಮೊದಲು ಅಭ್ಯರ್ಥಿ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಆಂಜನೇಯನ ಮೂರ್ತಿಯನ್ನು ನೀಡಿ ಗೌರವಿಸಿದರು. ಜತೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಮೂರ್ತಿಯನ್ನು ಕೂಡ ಯೋಗಿ ಅವರಿಗೆ ನೀಡಲಾಯಿತು. ಅಭಿಮಾನಿಯೊಬ್ಬರು ಬಿಡಿಸಿದ ಯೋಗಿ ಆದಿತ್ಯನಾಥ್‌ ಅವರ ಲೀಫ್‌ ಆರ್ಟ್‌ ಪ್ರೇಮ್‌ ಅನ್ನು ಯೋಗಿ ಅವರಿಗೆ ಹಸ್ತಾಂತರಿಸಲಾಯಿತು.

ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಮೂಡಬಿದಿರೆ ಅವರು ರೋಡ್‌ ಶೋ ವಾಹನದಲ್ಲಿ ಯೋಗಿ ಹಾಗೂ ಬಿಜೆಪಿ ಅಭ್ಯರ್ಥಿಗೆ ಸಾಥ್‌ ನೀಡಿದ್ದು, ಉಳಿದಂತೆ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಚುನಾವಣಾ ಉಸ್ತುವಾರಿ ರವಿಶಂಕರ್‌ ಮಿಜಾರು, ಬೂಡಾ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ ಮೊದಲಾದ ಪ್ರಮುಖರು ರೋಡ್‌ ಶೋದಲ್ಲಿ ಪಾಲ್ಗೊಂಡಿದ್ದರು.
ಸಂಜೆ 6.15ರ ಸುಮಾರಿಗೆ ಯೋಗಿ ಅವರಿದ್ದ ಹೆಲಿಕಾಪ್ಟರ್‌ ಮುಗಿಲೆತ್ತರದಲ್ಲಿ ಕಾಣುತ್ತಿದ್ದಂತೆ ಕಾರ್ಯಕರ್ತರು ಯೋಗಿಯ ಕುರಿತು ಜಯಘೋಷವನ್ನು ಹಾಕಿದ್ದು, ಉಳಿದಂತೆ ರೋಡ್‌ ಶೋ ಉದ್ದಕ್ಕೂ ಬಿಜೆಪಿ ಪಕ್ಷದ ಜತೆಗೆ ಪ್ರಧಾನಿ ಮೋದಿಯವರಿಗೆ ಜಯಘೋಷವನ್ನು ಹಾಕಿದರು.

ಯೋಗಿಯವರು ತಮ್ಮ ಮಾತಿನ ಸಂದರ್ಭ ಶಾಸಕ ರಾಜೇಶ್‌ ನಾೖಕ್‌ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಸೇರಿದ್ದ ಕಾರ್ಯಕರ್ತರು ಜೋರಾಗಿ ಜೈಕಾರ ಕೂಗಿದರು. ಜತೆಗೆ ಮಾತಿನುದ್ದಕ್ಕೂ ಭಜರಂಗ ದಳ ನಿಷೇಧಿಸುವ ಕುರಿತ ಕಾಂಗ್ರೆಸ್‌ ಹೇಳಿಕೆಯನ್ನು ಖಂಡಿಸುತ್ತಾ, ಕಾಂಗ್ರೆಸ್‌ ಪಿಎಫ್‌ಐ ಸಂಘಟನೆಗೆ ಪ್ರೋತ್ಸಾಹ ನೀಡಿದೆ ಎಂದು ಆರೋಪಿಸಿ ಅದಕ್ಕೆ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಬೇಕು.

Advertisement

ಸ್ಥಳೀಯ ಕ್ಷೇತ್ರಗಳಿಗೆ ಪ್ರಣಾಮ
ಸ್ಥಳೀಯ ಕ್ಷೇತ್ರಗಳಾದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವರು, ಶ್ರೀ ಮಹಾಲಿಂಗೇಶ್ವರ ದೇವರು, ಧರ್ಮಸ್ಥಳ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವರು, ನಂದಾವರ ಶ್ರೀ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಮೊದಲಾದ ದೇವರುಗಳಿಗೆ ಪ್ರಣಾಮಗಳನ್ನು ಸಲ್ಲಿಸಿ ಯೋಗಿ ತಮ್ಮ ಮಾತನ್ನು ಪ್ರಾರಂಭಿಸಿದರು.

ಮತ್ತೆ ರಾಜೇಶ್‌ ನಾೖಕ್‌ರನ್ನು ಗೆಲ್ಲಿಸಿ
2018ರಲ್ಲಿಯೂ ನಾನು ರಾಜೇಶ್‌ ನಾೖಕ್‌ ಅವರ ಪರವಾಗಿ ಮತಯಾಚನೆ ನಡೆಸಿದ್ದೆ, ಅವರನ್ನು ಅತ್ಯಧಿಕ ಬಹುಮತದಿಂದ ಆರಿಸುವಂತೆ ವಿನಂತಿಸಿದ್ದೆ, ಅದಕ್ಕೆ ನೀವೆಲ್ಲರೂ ಅಭೂತಪೂರ್ವವಾಗಿ ಸ್ಪಂದಿಸಿ, ಅವರನ್ನು ಗೆಲ್ಲಿಸಿದೀªರಿ, ಅದರ ಬಳಿಕ ಬಂಟ್ವಾಳ ಕ್ಷೇತ್ರ ಅಮೋಘ ಪ್ರಗತಿಗೆ ಸಾಕ್ಷಿಯಾಗಿದೆ, ಇನ್ನೊಮ್ಮೆ ಅವರನ್ನು ಗೆಲ್ಲಿಸಿ, ಕ್ಷೇತ್ರದ ಮತ್ತಷ್ಟು ಪ್ರಗತಿಗೆ ಕಾರಣಕರ್ತರಾಗಿ ಎಂದು ಕರೆಯಿತ್ತರು.

ಅಯೋಧ್ಯೆಗೆ ಸ್ವಾಗತಿಸಿದ ಯೋಗಿ
2024ರಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಅಲ್ಲಿಗೆ ನಿಮ್ಮನ್ನು ರಾಮನ ಭಕ್ತನಾಗಿ ಸ್ವಾಗತಿಸುತ್ತೇನೆ ಎಂದು ಯೋಗಿ ಸರ್ವರನ್ನೂ ಆಮಂತ್ರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next