Advertisement

ಗೋರಖ್‌ಪುರ ನಿವಾಸಿಗಳೊಂದಿಗಿನ ಹೋಳಿ ಮೆರವಣಿಗೆಯಲ್ಲಿ ಯೋಗಿ ಭಾಗಿ

04:10 PM Mar 04, 2023 | Team Udayavani |

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈ ಬಾರಿಯ ಹೋಳಿ ಹಬ್ಬವನ್ನು ಗೋರಖ್‌ಪುರ ನಿವಾಸಿಗಳೊಂದಿಗೆ ಆಚರಿಸಲಿದ್ದಾರೆ. ಮಾರ್ಚ್‌ 6 ರಂದು ನಡೆಯಲಿರುವ ಹೋಳಿ ಮೆರವಣಿಗೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾಗಿಯಾಗಲಿದ್ದಾರೆ.

Advertisement

ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್‌ 8 ರಂದು ನಡೆಯುವ ಬೃಹತ್‌ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಗೋರಖ್‌ಪುರ ನಿವಾಸಿಗಳ ಜೊತೆಗೆ ಯೋಗಿ ಬಣ್ಣ, ಹೂವಿನ ಸುರಿಮಳೆಗೈಯ್ಯಲಿದ್ದಾರೆ.

ಅದಲ್ಲದೇ, ಸಿಎಂ ಆದಿತ್ಯನಾಥ್‌ ʻಹೋಳಿ ಕಾ ದಹನ್‌ʼ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಾರ್ಚ್‌ 8 ರಂದು ನಡೆಯಲಿರುವ ನರಸಿಂಹ ದೇವರ ಮೆರವಣಿಗೆರಯಲ್ಲಿಯೂ ಮುಖ್ಯಮಂತ್ರಿಗಳು ಬಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡೂ ಮೆರವಣಿಗೆಗೆ ಈಗಿಂದಲೇ ಭಾರೀ ಸಿದ್ಧತೆ  ನಡೆಸಲಾಗಿದ್ದು ಭದ್ರತಾ ಪಡೆಗಳು ತೀವ್ರ ತಪಾಸಣೆಯಲ್ಲಿ ತೊಡಗಿವೆ.

ಮಾರ್ಚ್‌ 6ರಂದು ಘಂಟಾಘರ್‌ನಿಂದ ಮೆರವಣಿಗೆ ಆರಂಭವಾಗಲಿದ್ದು ಈ ವೇಳೆ ಯೋಗಿ ನರಸಿಂದ ದೇವರಿಗೆ ಮಹಾರತಿ ನಡೆಸಲಿದ್ದಾರೆ. ಮಂಗಳವಾರ ಗೋರಖ್‌ನಾಥ್‌ ದೇಗುಲದಲ್ಲಿಯೇ ಯೋಗಿ ವಾಸ್ತವ್ಯ ಹೂಡಲಿದ್ದಾರೆ. ಪೀಠಾಧಿಪತಿ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಬುಧವಾರ ನರಸಿಂಹ ದೇವರ ಮೆರವಣಿಗೆಯೂಈ ನಡೆಯಲಿದೆ. ಇದಿಕ್ಕಾಗಿ ಆಡಳಿತ ಮಂಡಳಿ ಸಕಲ ಸಿದ್ಧತೆ ನಡೆಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next