Advertisement

ಗೋರಖ್‌ಪುರ ನಿವಾಸಿಗಳೊಂದಿಗಿನ ಹೋಳಿ ಮೆರವಣಿಗೆಯಲ್ಲಿ ಯೋಗಿ ಭಾಗಿ

04:10 PM Mar 04, 2023 | Team Udayavani |

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈ ಬಾರಿಯ ಹೋಳಿ ಹಬ್ಬವನ್ನು ಗೋರಖ್‌ಪುರ ನಿವಾಸಿಗಳೊಂದಿಗೆ ಆಚರಿಸಲಿದ್ದಾರೆ. ಮಾರ್ಚ್‌ 6 ರಂದು ನಡೆಯಲಿರುವ ಹೋಳಿ ಮೆರವಣಿಗೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾಗಿಯಾಗಲಿದ್ದಾರೆ.

Advertisement

ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್‌ 8 ರಂದು ನಡೆಯುವ ಬೃಹತ್‌ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಗೋರಖ್‌ಪುರ ನಿವಾಸಿಗಳ ಜೊತೆಗೆ ಯೋಗಿ ಬಣ್ಣ, ಹೂವಿನ ಸುರಿಮಳೆಗೈಯ್ಯಲಿದ್ದಾರೆ.

ಅದಲ್ಲದೇ, ಸಿಎಂ ಆದಿತ್ಯನಾಥ್‌ ʻಹೋಳಿ ಕಾ ದಹನ್‌ʼ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಾರ್ಚ್‌ 8 ರಂದು ನಡೆಯಲಿರುವ ನರಸಿಂಹ ದೇವರ ಮೆರವಣಿಗೆರಯಲ್ಲಿಯೂ ಮುಖ್ಯಮಂತ್ರಿಗಳು ಬಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡೂ ಮೆರವಣಿಗೆಗೆ ಈಗಿಂದಲೇ ಭಾರೀ ಸಿದ್ಧತೆ  ನಡೆಸಲಾಗಿದ್ದು ಭದ್ರತಾ ಪಡೆಗಳು ತೀವ್ರ ತಪಾಸಣೆಯಲ್ಲಿ ತೊಡಗಿವೆ.

ಮಾರ್ಚ್‌ 6ರಂದು ಘಂಟಾಘರ್‌ನಿಂದ ಮೆರವಣಿಗೆ ಆರಂಭವಾಗಲಿದ್ದು ಈ ವೇಳೆ ಯೋಗಿ ನರಸಿಂದ ದೇವರಿಗೆ ಮಹಾರತಿ ನಡೆಸಲಿದ್ದಾರೆ. ಮಂಗಳವಾರ ಗೋರಖ್‌ನಾಥ್‌ ದೇಗುಲದಲ್ಲಿಯೇ ಯೋಗಿ ವಾಸ್ತವ್ಯ ಹೂಡಲಿದ್ದಾರೆ. ಪೀಠಾಧಿಪತಿ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಬುಧವಾರ ನರಸಿಂಹ ದೇವರ ಮೆರವಣಿಗೆಯೂಈ ನಡೆಯಲಿದೆ. ಇದಿಕ್ಕಾಗಿ ಆಡಳಿತ ಮಂಡಳಿ ಸಕಲ ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next