Advertisement

ಯೋಗರಾಜ್‌ ಭಟ್‌ಗೆ ಜನಾಸೇವಾ ಟ್ರಸ್ಟ್‌ ಕೀರ್ತಿಕಳಶ ಪುರಸ್ಕಾರ

11:58 PM Nov 28, 2019 | Sriram |

ಕೋಟ: ಜನಸೇವಾ ಟ್ರಸ್ಟ್‌ ರಿ. ಮೂಡುಗಿಳಿಯಾರು ಆಶ್ರಯದಲ್ಲಿ ಕೊಡಮಾಡುವ 2020ನೇ ಸಾಲಿನ ಕೀರ್ತಿಕಳಶ ಪುರಸ್ಕಾರಕ್ಕೆ ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ್‌ ಭಟ್‌ ಆಯ್ಕೆಯಾಗಿದ್ದಾರೆ.

Advertisement

ಉಡುಪಿ ಜಿಲ್ಲೆಯ ಮಂದಾರ್ತಿ ಮೂಲದವರಾದ ಯೋಗರಾಜ್‌ ಭಟ್‌ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಸಿನೇಮಾಗಳ ಸೃಷ್ಟಿಗೆ ನಾಂದಿ ಹಾಡಿ ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು.

ಚಿತ್ರನಿರ್ದೇಶಕರಾಗಿಯಷ್ಟೇ ಅಲ್ಲದೆ ಸಾಹಿತ್ಯ ರಚೆನೆಯಲ್ಲಿಯೂ ಯಶಸ್ಸನ್ನ ಕಂಡವರು ಇವರ ಸಾಧನೆಯನ್ನು ಗುರುತಿಸಿ ಕೀರ್ತಿಕಲಶ ಪುರಸ್ಕಾರ ನೀಡಲಾಗುತ್ತಿದ್ದು ಫೆ.8ರಂದು ಮೂಡುಗಿಳಿಯಾರಿನಲ್ಲಿ ಅಭಿಮತ ಸಂಭ್ರಮ ಹೆಸರಲ್ಲಿ ಆಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾಣಎಂ.ಮೋಹನ್‌ ಆಳ್ವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅಭಿಮತ ಸಂಭ್ರಮದ ಅಧ್ಯಕ್ಷರಾದ ಉಳೂ¤ರು ಅರುಣ್‌ ಕುಮಾರ್‌ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಟೀಮ್‌ ಅಭಿಮತದ ಸಂಚಾಲಕರಾದ ಪ್ರವೀಣ್‌ ಯಕ್ಷಿಮಠ, ಸಾಂಸ್ಕೃತಿಕ ಚಿಂತಕ ಉದಯ್‌ ಶೆಟ್ಟಿ ಪಡುಕರೆ, ಜನಸೇವಾ ಟ್ರಸ್ಟ್‌ ಕಾರ್ಯದರ್ಶಿ ಅಶೋಕ್‌ ಬನ್ನಾಡಿ, ಕೋಶಾಧಿ ಕಾರಿ ಅರುಣ್‌ ಶೆಟ್ಟಿ ಪಡುಮನೆ, ಪ್ರಮುಖರಾದ ಕೊತ್ತಾಡಿ ಸಂತೋಷ್‌ ಕುಮಾರ್‌ ಶೆಟ್ಟಿ, ಹೆ„ಕಾಡಿ ವಿಜಯ್‌ ಕುಮಾರ್‌ ಶೆಟ್ಟಿ, ಕಿರಣ್‌ ಆಚಾರ್ಯ ಗಿಳಿಯಾರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next