ನೈನಿತಾಲ್: ಕಂಪನಿಗಳಿಸುತ್ತಿರುವ ಲಾಭದಲ್ಲಿ ಸ್ವಲ್ಪ ಪಾಲನ್ನು ರೈತರು ಮತ್ತು ಸ್ಥಳೀಯ ಸಮುದಾಯಗಳಿಗೆ ನೀಡುವಂತೆ ಯೋಗಗುರು ಬಾಬಾ ರಾಮ್ದೇವ್ ನಡೆಸುತ್ತಿರುವ ಕಂಪೆನಿ ದಿವ್ಯ ಫಾರ್ಮಸಿಗೆ ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾ ಲಯವೊಂದು ಇಂಥ ಆದೇಶ ನೀಡುತ್ತಿರುವುದು ಇದೇ ಮೊದಲು. ಉತ್ತರಾಖಂಡ ಜೀವ ವೈವಿಧ್ಯ ಮಂಡಳಿ (ಯುಬಿಬಿ) 2018ರ ಯುಬಿಬಿ ಕಾಯ್ದೆಗೆ ಅನುಗುಣ ವಾಗಿ, ದಿವ್ಯ ಫಾರ್ಮಸಿ ತಾನು ಸ್ಥಳೀಯರಿಂದ ಪಡೆದುಕೊಳ್ಳು ತ್ತಿರುವ ಲಾಭವನ್ನು ಸ್ಥಳೀಯರ ಜೊತೆ ಹಂಚಿ ಕೊಳ್ಳಲು ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಫಾರ್ಮಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್ ಯುಬಿಬಿ ನಿರ್ದೇಶನವನ್ನು ಎತ್ತಿ ಹಿಡಿದಿದೆ. ಫಾರ್ಮಸಿ ಕಚ್ಚಾ ವಸ್ತುಗಳನ್ನು ಪರಿಸರದಿಂದ ಪಡೆಯುತ್ತಿದೆ. ಜೈವಿಕ ಸಂಪನ್ಮೂಲ ಎಲ್ಲ ರಿಗೂ ಸೇರಿದ್ದು. ಕಂಪೆ ನಿಗೆ ಬರುವ 421 ಕೋಟಿ ರೂ. ಲಾಭ ದಲ್ಲಿ 2 ಕೋಟಿ ರೂ.ಗಳನ್ನು ರೈತರು, ಸ್ಥಳೀಯರಿಗೆ ನೀಡ ಬೇಕು ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.