Advertisement

ಗಡಿ ಭಾಗದ ನಿಪ್ಪಾಣಿ ನಗರದಲ್ಲಿ ಬೃಹತ್ ಯೋಗ ದಿನಾಚರಣೆ: ಜೊಲ್ಲೆ ಗ್ರೂಪ್‌ ನಿಂದ ಆಯೋಜನೆ

11:41 AM Jun 21, 2022 | Team Udayavani |

ಚಿಕ್ಕೋಡಿ: ಪ್ರಧಾನಿ ನರೇಂದ್ರ ಮೋದಿ ಭಾರತದ ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ದಿನನಿತ್ಯದಲ್ಲಿ ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Advertisement

ನಿಪ್ಪಾಣಿ ನಗರದ ಶಿರಪೇವಾಡಿ ಜೊಲ್ಲೆ ಉದ್ಯೋಗ ಸಮೂಹದ ಸಿಬಿಎಸ್ ಸಿ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಯೋಗ ಮನುಷ್ಯನ ಆರೋಗ್ಯದ ಜೊತೆಗೆ ಮನಸ್ಸು ಶಾಂತಿಗೊಳಿಸುತ್ತದೆ ಎಂದರು.

ಪಥಂಜಲಿ ಯೋಗ ಪೀಠದ ಕಾರ್ನಾಟಕ ಅಧ್ಯಕ್ಷ ಬಾಬರಲಾಲ ಆರ್ಯ ಅವರು. ಯೋಗದ ಮಹತ್ವ ತಿಳಿಸಿ ಶಿಬಿರಾರ್ಥಿಗಳಿಗೆ ಯೋಗ ಹೇಳಿಕೊಟ್ಟರು.

ವೇದಿಕೆ ಮೇಲೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ.ಡಿಡಿಪಿಐ ಮೋಹನಕುಮಾರ ಹಂಚ್ಯಾಟೆ.  ಎಡಿಎಚ್ ಒ ಡಾ.ಎಸ್.ಎಸ್.ಗಡೇದ, ಡಿವೈಎಸ್ ಪಿ ಬಸವರಾಜ ಎಲಿಗಾರ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ. ಬೀರೇಶ್ವರ ಸೊಸಾಯಿಟಿ ಚೇರಮನ್ ಜಯಾನಂದ ಜಾಧವ, ತಹಶೀಲ್ದಾರ ಮೋಹನ ಭಸ್ಮೆ,ಪ್ರಗತಿಪರ ಕೃಷಿಕ ಶಿವಮೂರ್ತಿ ಫಡಲಾಳೆ, ನ್ಯಾಯವಾದಿ ಅಶೋಕ ಹರಗಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ ಮುಂತಾದವರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next