Advertisement

ಯೆಯ್ನಾಡಿ: ಕಾರಿಗೆ ಬೈಕ್‌ ಢಿಕ್ಕಿ- ಇಬ್ಬರಿಗೆ ಗಾಯ 

12:31 PM Jul 24, 2018 | Team Udayavani |

ಮಂಗಳೂರು: ಯೆಯ್ನಾಡಿ ಜಂಕ್ಷನ್‌ನಲ್ಲಿ ಬೈಕೊಂದು ಕಾರಿಗೆ ಢಿಕ್ಕಿ ಹೊಡೆದು ಸವಾರ ಮೂಸಾ ಮುನೀಲ್‌ ಮತ್ತು ಕಾರಿನಲ್ಲಿದ್ದ ಮಹಿಳೆ ದಯಾ ರೇಖಾ (49) ಅವರು ಗಾಯಗೊಂಡಿದ್ದಾರೆ. ಕಾರು ಚಾಲಕ ಸುರೇಶ್‌ ಭಂಡಾರಿ ಅಪಾಯದಿಂದ ಪಾರಾಗಿದ್ದಾರೆ. 

Advertisement

ಬಂಟ್ವಾಳ ತಾಲೂಕು ಕಳ್ಳಿಗೆಯ ಸುರೇಶ್‌ ಭಂಡಾರಿ ಅವರು ಪತ್ನಿ ಜತೆ ಕಾರಿನಲ್ಲಿ ಯೆಯ್ನಾಡಿಯಲ್ಲಿರುವ ಅತ್ತೆ ಮನೆಗೆ ಹೊರಟಿದ್ದು, ಸಂಜೆ 4 ಗಂಟೆ ವೇಳೆಗೆ ಯೆಯ್ನಾಡಿ ಜಂಕ್ಷನ್‌ನಲ್ಲಿ ಬಲ ಬದಿಗೆ ತಿರುಗಿಸುತ್ತಿದ್ದಾಗ ಬೋಂದೆಲ್‌ ಕಡೆಯಿಂದ ಕೆಪಿಟಿ ಕಡೆಗೆ ಅತಿ ವೇಗದಲ್ಲಿ ಮೂಸಾ ಮುನೀಲ್‌ ಚಲಾಯಿಸಿಕೊಂಡು ಬಂದ ಬೈಕ್‌ ಕಾರಿನ ಬಾಗಿಲಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಮೂಸಾ ಕಾರಿನ ಮೇಲ್ಗಡೆ ಎಸೆಯಲ್ಪಟ್ಟಿದ್ದರು. ಸುರೇಶ್‌ ಭಂಡಾರಿ ಅವರು ಮೂಸಾರನ್ನು ಕೆಳಗಿಳಿಸಿದ್ದರು. 

ಮೂಸಾ ಹಾಗೂ ದಯಾ ರೇಖಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಸಾ ಉಳ್ಳಾಲದ ನಿವಾಸಿಗಿದ್ದು, ವಿದ್ಯಾರ್ಥಿ ಎನ್ನಲಾಗಿದೆ. ಟ್ರಾಫಿಕ್‌ ಪೂರ್ವ ಪೊಲೀಸ್‌ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next