Advertisement

10 ದಿನದೊಳಗೆ ಎತ್ತಿನಹೊಳೆ ಯೋಜನೆ ಉದ್ಘಾಟನೆೆ: ಡಿ.ಕೆ. ಶಿವಕುಮಾರ್‌ ಪ್ರಕಟ

11:41 PM Aug 29, 2024 | Team Udayavani |

ಹಾಸನ: ಎತ್ತಿನ ಹೊಳೆ ಯೋಜನೆಯ ಚೆಕ್‌ ಡ್ಯಾಂಗಳಿಂದ ನೀರೆತ್ತುವ ಕಾರ್ಯ ಬಹುತೇಕ ಯಶಸ್ವಿ ಯಾಗಿದ್ದು ಮುಂದಿನ 10 ದಿನಗಳ ಒಳಗೆ ಎತ್ತಿನಹೊಳೆ ಯೋಜನೆ ಉದ್ಘಾಟನೆೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ 2ನೇ ದಿನವಾದ ಗುರುವಾರವೂ ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತೇ ಮುಖ್ಯಮಂತ್ರಿ ಜತೆ ಮಾತನಾಡುವೆ ಎಂದರು.

ಬುಧವಾರ ಸಂಜೆ ಕುಂಬರಡಿ ಬಳಿ ಒಂದನೇ ಚೆಕ್‌ ಡ್ಯಾಂನಿಂದ ಪ್ರಾಯೋಗಿಕವಾಗಿ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದೆ. ಉದ್ಘಾಟನೆ ಕಾರ್ಯಕ್ರಮ ಎಲ್ಲಿ ಮಾಡಬೇಕೆಂಬ ವಿಚಾರವಾಗಿ ಅಧಿಕಾರಿಗಳಿಗೆ ನಿರ್ದೇಶನ ಕೊಡಬೇಕಿತ್ತಾದ್ದರಿಂದ ಸಕಲೇಶಪುರದಲ್ಲೇ ಉಳಿದುಕೊಂಡಿದ್ದೆ. ಉದ್ಘಾಟನೆ ಕಾರ್ಯಕ್ರಮ ಐತಿಹಾಸಿಕವಾಗಲಿದೆ ಎಂದರು.

ಈಗ 550 ಕ್ಯುಸೆಕ್‌ ನೀರೆತ್ತಲಾಗುತ್ತಿದೆ. ಉದ್ಘಾಟನೆ ದಿನ ಇದರ 6 ಪಟ್ಟು ನೀರೆತ್ತಲಾಗುವುದು. ಯೋಜನೆಪೂರ್ಣಗೊಳ್ಳಲು ಸ್ವಲ್ಪ ತೊಡಕಿದೆ. ಹಾಗಾಗಿ ವಾಣಿವಿಲಾಸ ಸಾಗರ ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳಲು ಈಗ ನೀರು ಹರಿಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next