Advertisement

ಪದ್ಮನಾಭನ ದರ್ಶನಕ್ಕೆ ಯೇಸುದಾಸ್‌ಗೆ ಒಪ್ಪಿಗೆ?

07:20 AM Sep 18, 2017 | Team Udayavani |

ತಿರುವನಂತಪುರಂ: ಶತಮಾನಗಳಷ್ಟು ಹಳೆಯದಾದ ಪದ್ಮನಾಭ ದೇವಾಲಯ ಪ್ರವೇಶಕ್ಕೆ ಅನುಮತಿ ಕೊಡಿ ಎಂದು ಕೋರಿ ಖ್ಯಾತ ಗಾಯಕ ಕೆ.ಜೆ. ಯೇಸುದಾಸ್‌ ಅವರು ದೇವಾಲಯದ ಟ್ರಸ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೇವಲ ಹಿಂದೂಗಳು ಹಾಗೂ ಹಿಂದುತ್ವದಲ್ಲಿ ನಂಬಿಕೆಯಿಟ್ಟುಕೊಂಡವರಿಗೆ ಮಾತ್ರ ದೇವಾಲಯ ಪ್ರವೇಶ ಎಂಬ ಕಟು ನಿಯಮದ ಹಿನ್ನೆಲೆಯಲ್ಲಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ನಾನು ಹುಟ್ಟಿನಿಂದ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ್ದರೂ ಹಿಂದೂ ಧರ್ಮದಲ್ಲಿ ನಂಬಿಕೆಯಿಟ್ಟಿದ್ದೇನೆ. ಹಾಗಾಗಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

Advertisement

ಹಿಂದೂ ಧರ್ಮದಲ್ಲಿ ನಂಬಿಕೆಯಿಟ್ಟವರು ದೇವಾಲಯ, ದೇವರ ದರ್ಶನಕ್ಕೆ ಬರುವುದಕ್ಕೆ ಯಾವ ಅಡ್ಡಿಯೂ ಇಲ್ಲ ಎಂದು ದೇವಾಲಯದ ಅಧಿಕಾರಿ ವಿ. ರತೀಶನ್‌ ಹೇಳಿದ್ದಾರೆ. ಜತೆಗೆ, ಯೇಸುದಾಸ್‌ ಅವರು ಯಾವುದೇ ನಿರ್ದಿಷ್ಟ ದಿನಾಂಕವನ್ನು ಹೇಳಿಲ್ಲ. ಸೆ.30ರಂದು ಅಂದರೆ ವಿಜಯದಶಮಿಯ ದಿನ ಅವರು ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next