Advertisement

ಯಲ್ಲಾಪುರ : ಬೈಕ್ ಗೆ ಲಾರಿ ಢಿಕ್ಕಿಯಾಗಿ ಹುಬ್ಬಳ್ಳಿಯ ಯುವಕರಿಬ್ಬರ ಸಾವು

05:00 PM Jul 11, 2022 | Team Udayavani |

ಯಲ್ಲಾಪುರ : ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರ ಸಮೀಪ ನಡೆದಿದೆ.

Advertisement

ಮೃತಪಟ್ಟ ಬೈಕ್ ಸವಾರರನ್ನು ಹುಬ್ಬಳ್ಳಿಯ ಮಹಂತೇಶ ರೇವಣಪ್ಪ ಶೀಲವಂತರ( 23) ,ಹಾಗೂ ಹಳೆ ಹುಬ್ಬಳ್ಳಿಯ ಸುಮಿತ್ ಅಶೋಕ ಬಸವಾ (25) ಎಂದು ಗುರುತಿಸಲಾಗಿದೆ.

ಆರೋಪಿತ ಲಾರಿ ಚಾಲಕ ಶಿವರಾಜ ಚಿಂಚಲಿ ತನ್ನ ಗೂಡ್ಸ್ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯ ಚಲಿಸಿಕೊಂಡು ಬಂದು ಗುಳ್ಳಾಪುರ ಸಮೀಪ ತನ್ನ ನಿಯಂತ್ರಣ ಕಳೆದುಕೊಂಡು ಯಲ್ಲಾಪುರ ಕಡೆಗೆ ನಿಧಾನವಾಗಿ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದಾನೆ.ಇದರಿಂದ ಹಿಂಬದಿಯ ಸವಾರ ಮಹಾಂತೇಶ ಸ್ಥಳದಲ್ಲೇ ಮೃತಪಟ್ಟಿದ್ದು,ಬೈಕ್ ಚಲಾಯಿಸುತ್ತಿದ್ದ ಸುಮಿತ್ ಗಂಭೀರವಾಗಿ ಗಾಯಗೊಂಡು ಯಲ್ಲಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ
ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next