Advertisement

Yellapur ‌ಕ್ಷೇತ್ರ ಬರಗಾಲ ಘೋಷಿಸಿ: ಶಾಸಕ ಶಿವರಾಮ ಹೆಬ್ಬಾರ್

04:16 PM Jun 30, 2023 | Team Udayavani |

ಶಿರಸಿ: ಯಲ್ಲಾಪುರ, ಬನವಾಸಿ, ಮುಂಡಗೋಡ ಪ್ರದೇಶ ಒಳಗೊಂಡ ಯಲ್ಲಾಪುರ ವಿಧಾನ ಸಭೆ ವ್ಯಾಪ್ತಿಯನ್ನು ಬರಗಾಲ ಕ್ಷೇತ್ರ ಎಂದು‌ ಘೊಷಿಸುವಂತೆ‌ ಮಾಜಿ ಸಚಿವ, ಶಾಸಕ ಶಿವರಾಮ ಹೆಬ್ಬಾರ್ ಆಗ್ರಹಿಸಿದರು.

Advertisement

ಕ್ಷೇತ್ರದಲ್ಲಿ‌ ಅಂತರ್ಜಲ ಕೊರತೆ ಆಗಿದೆ. ಕುಡಿಯುವ ನೀರಿನ‌ ಸಮಸ್ಯೆ ಕಾಡುತ್ತಿದೆ. ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿ‌ ಮಳೆಯ‌ ಪ್ರಮಾಣ ಕೊರತೆ ಆಗಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಶೇ.70 ಮಳೆಯ ಕೊರತೆ ಆಗಿದೆ. ಬಿತ್ತಿದ ಬೀಜ‌ ಕೂಡ ಹಾನಿಯಾಗಿದೆ. ಅಡಿಕೆ ಬೆಳೆಗೂ ಶೇ.50 ರಷ್ಟು ಬೆಳೆಗೆ ಹಾನಿಯಾಗಿದೆ ಎಂದೂ ಹೇಳಿದರು.

ವರ್ಗವಣೆ ‌ಮಾಡುವಾಗ ಪರ್ಯಾಯ ಬಂದ ಬಳಿಕ ಬಿಡುಗಡೆ ಮಾಡಬೇಕು. ಇಲ್ಲವಾದರೆ ಆರೋಗ್ಯ, ಕೆಇಬಿ, ಕೆಸ್ಸಾರ್ಟಿಸಿಗೆ ವಿಶೇಷ ಸಮಸ್ಯೆ ಆಗುತ್ತದೆ. ಜಿಲ್ಲಾ ಸಚಿವರು, ಅಧಿಕಾರಿಗಳು ಈ ಬಗ್ಗೆ ಲಕ್ಷ್ಯ ಹಾಕಬೇಕಿದೆ ಎಂದರು. ಈ ವೇಳೆ ದ್ಯಾಮಣ್ಣ ದೊಡ್ಮನಿ, ಪ್ರಶಾಂತ ಗೌಡ, ಮಂಗಲಾ ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next