Advertisement

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

09:16 PM May 03, 2024 | Team Udayavani |

ಯಲ್ಲಾಪುರ : ಟಿಪ್ಪರ್ ಲಾರಿ‌ ದ್ವಿಚಕ್ರವಾಹನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಂದೆಯ ಸಮ್ಮುಖದಲ್ಲೇ ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಬಳಗಾರ್ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.

Advertisement

ಟಿಪ್ಪರ್ ಚಾಲಕ ತನ್ನ ಯಾವುದೇ ಸೂಚನೆ ನೋಡದೇ ಒಮ್ಮೆಲೆ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರ ಲಾರಿಗೆ ಗುದ್ದಬೇಕಾಯಿತು.ಬೈಕ್ ನಲ್ಲಿದ್ದ ಸಹಸವಾರೆ ನಾಗರತ್ನ ಚಂದ್ರಶೇಖರ ಗೌಡ ಮಾವಿನಮನೆ (೧೦) ಗಾಲಿಯಡಿ ಸಿಲುಕಿ ಮೃತಪಟ್ಟಿದ್ದಾಳೆ.

ಕುಪ್ಪಳ್ಳಿ ಮಾವಿನಮನೆಯ ಬೈಕ್ ಸವಾರ ಚಂದ್ರಶೇಖರ ನರಸಿಂಹ ಗೌಡ ಕೂಲಿಕಾರ್ಮಿಕರಾಗಿದ್ದು ಗಂಭೀರಸ್ವರೂಪದ ಗಾಯವಾಗಿದೆ.ಚಾಲಕ ಟಿಪ್ಪರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ .ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next