Advertisement

Yelandur: ಅಪರೂಪದ ನಕ್ಷತ್ರ ಆಮೆ ಕಳ್ಳ ಸಾಗಾಟ; ಇಬ್ಬರ ಬಂಧನ

07:31 PM Oct 15, 2024 | Team Udayavani |

ಯಳಂದೂರು: ಅಪರೂಪದ ನಕ್ಷತ್ರ ಆಮೆ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವ ಘಟನೆ ಅ.14ರ ಸೋಮವಾರ ರಾತ್ರಿ ನಡೆದಿದೆ.

Advertisement

ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೋಡಿವೂರು ಗ್ರಾಮದ ಕಾಳಪ್ಪ ರಾಮಪ್ಪ ಹಾಗೂ ಜಿಲ್ಲೆಯ ಮಲ್ಲಿಗೆ ಬಾವಿದೊಡ್ಡಿ ಗ್ರಾಮದ ಮುತ್ತುರಾಜ್ ಎಂಬ ಇಬ್ಬರನ್ನು ಬಂಧಿಸಿ ಇವರಿಂದ ಜೀವಂತ ನಕ್ಷತ್ರ ಆಮೆ, 1 ಬೈಕ್ ಹಾಗೂ 1 ಬ್ಯಾಗನ್ನು ವಶಪಡಿಸಿಕೊಳ್ಳಲಾಗಿದೆ.

ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಆರಕ್ಷಕ ಉಪ ನಿರೀಕ್ಷಕ ವಿಜಯರಾಜ್ ನೇತೃತ್ವದ ತಂಡ ತಾಲೂಕಿನ ಮದ್ದೂರು ಗ್ರಾಮದ ಪಕ್ಕದಲ್ಲಿರುವ ಎಳೆ ಪಿಳ್ಳಾರಿ ದೇಗುಲದ ಬಳಿಯ ಕೊಳದ ಹತ್ತಿರ ಜೀವಂತ ನಕ್ಷತ್ರ ಆಮೆಯನ್ನು ಹಿಡಿದು ಸಾಗಿಸಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಮುಂದಿನ ಕ್ರಮ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next