Advertisement

ಸಿದ್ಧಗಂಗಾ ಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿ

06:00 AM May 18, 2018 | Team Udayavani |

ತುಮಕೂರು: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು ಗುರುವಾರ ಸಂಜೆ
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿಗಳ ದರ್ಶನ ಮಾಡಿ, ಆಶೀರ್ವಾದ ಪಡೆದರು.

Advertisement

ಶಾಸಕರೊಂದಿಗೆ ಆಗಮಿಸಿದ ಯಡಿಯೂರಪ್ಪ,ಶ್ರೀಗಳಿಗೆ ಶಾಲು, ಹಾರ ಹಾಕಿ, ಫ‌ಲ ನೀಡಿ ಗೌರವಿಸಿ,ಶ್ರೀಗಳ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ಶ್ರೀಗಳು ಯಡಿಯೂರಪ್ಪ ಅವರಿಗೆ ಶಾಲು, ಹಾರ ಹಾಕಿ, ತಲೆಯ ಮೇಲೆ ಅಕ್ಷತೆ ಹಾಕಿ, ಆಶೀರ್ವಾದ ಮಾಡಿದರು. ಬಳಿಕ, ಸ್ವಲ್ಪ ಹೊತ್ತು ಶ್ರೀಗಳ ಜೊತೆ ಅವರು ಮಾತುಕತೆ ನಡೆಸಿದರು. ಈ ವೇಳೆ, ಸಿದ್ದಲಿಂಗ ಸ್ವಾಮಿಗಳು ಕೂಡ ಉಪಸ್ಥಿತರಿದ್ದು, ಯಡಿಯೂರಪ್ಪಗೆ ಆಶೀರ್ವಾದ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next