Advertisement

ಹಸಿರು ಪೇಟ ನಿರಾಕರಿಸಿದ ಯಡಿಯೂರಪ್ಪ

08:39 AM Dec 16, 2017 | |

ಮುದಗಲ್ಲ: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಸುಕ್ಷೇತ್ರ ಅಂಕಲಿಮಠಕ್ಕೆ ಭೇಟಿ ನೀಡಿ ಶ್ರೀ ವೀರಭದ್ರೇಶ್ವರರ ದರ್ಶನ ಮತ್ತು ಶ್ರೀಮಠದ ಪೀಠಾಧಿಪತಿ ಶ್ರೀ ವೀರಭದ್ರ ಸ್ವಾಮಿಗಳಿಂದ ಆಶೀರ್ವಾದ ಪಡೆದರು. ಈ ವೇಳೆ
ಶ್ರೀಗಳು ಹಸಿರು ಪೇಟ ಹಾಕಿ ಸನ್ಮಾನಿಸಲು ಮುಂದಾದಾಗ ಯಡಿಯೂರಪ್ಪ ನಿರಾಕರಿಸಿದರು.

Advertisement

ಸುಕ್ಷೇತ್ರ ಅಂಕಲಿಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಿಂದ ಆಶೀರ್ವಾದ ಪಡೆದ ಯಡಿಯೂರಪ್ಪ ಅವರಿಗೆ ಹಸಿರು ಬಣ್ಣದ ಮೈಸೂರು ಪೇಟವನ್ನು ತೊಡಿಸಿ ಆಶೀರ್ವದಿಸಲು ಶ್ರೀಗಳು ಮುಂದಾದರು. ಇದನ್ನು ಗಮನಿಸಿದ ಯಡಿಯೂರಪ್ಪ ಅವರು, ಹುನಗುಂದ ಮಾಜಿ ಶಾಸಕ ಹಾಗೂ ಶ್ರೀಮಠದ ಭಕ್ತರಾದ ದೊಡ್ಡನಗೌಡ ಪಾಟೀಲರ ಮೂಲಕ ಹಸಿರು ಪೇಟ ಹಾಕಬೇಡಿ ಅಂತ ಶ್ರೀಗಳಿಗೆ ಹೇಳಿಸುವ ಮೂಲಕ ಹಸಿರು ಪೇಟ ಹಾಕಿಸಿಕೊಳ್ಳಲು ನಿರಾಕರಿಸಿದರು. ಅನಿವಾರ್ಯವಾಗಿ ಶ್ರೀಗಳು ಶಾಲು, ಹೂವಿನಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next