Advertisement

ಸಿಎಂ ವಿರುದ್ಧ ಮತ್ತೆ ಏಕವಚನ ಪ್ರಯೋಗಿಸಿದ ಯಡಿಯೂರಪ್ಪ

06:50 AM Aug 19, 2017 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಏಕವಚನ ಪ್ರಯೋಗ ಮಾಡಿ ತರಾಟೆಗೆ ತೆಗೆದುಕೊಂಡರು.

Advertisement

ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಅಮಿತ್‌ ಶಾ ಅವರು ಕೇಂದ್ರ ಸರ್ಕಾರ ಕೊಟ್ಟ ಹಣದ ಲೆಕ್ಕ ಕೇಳಿದಾಗ ಕೊಡಬೇಕಾದುದು ನಿನ್ನ ಕರ್ತವ್ಯ, ಅದರ ಬದಲು ಅವರಾರು ಎಂದು ಕೇಳುತ್ತೀಯಾ? ಯಾವುದೇ
ಪ್ರಜೆಗೆ ಲೆಕ್ಕ ಕೇಳುವ ಸಂಪೂರ್ಣ ಸ್ವಾತಂತ್ರ್ಯಇದೆ. ಜನ ಕೊಟ್ಟ ಹಣವನ್ನು ಲೂಟಿ ಮಾಡಲು ಅಲ್ಲಿ (ಮುಖ್ಯಮಂತ್ರಿ ಸ್ಥಾನ) ನಿನ್ನನ್ನು ಕೂರಿಸಿಲ್ಲ’ ಎಂದು ಕಿಡಿ ಕಾರಿದರು. 

“ಮರಳು ದಂಧೆಯಲ್ಲಿ ಮಹದೇವಪ್ಪ ಮಗ, ನಿನ್ನ ಮಗ ಹಗರಣಗಳಲ್ಲಿ ಸಿಲುಕಿಕೊಂಡಿರುವುದು ನಿಜ ತಾನೆ? ಅದೇ ರೀತಿ ಅಕ್ರಮವಾಗಿ ಕೊಟ್ಟ ವಾಚ್‌ ಕಟ್ಟಿಕೊಂಡು ನಂತರ ವಿಧಾನಸೌಧದಲ್ಲಿ ಇಟ್ಟಿದ್ದೀಯಾ. ಯಾರು ಕೊಟ್ಟ ವಾಚ್‌ ಅದು? ಹಗರಣದ ಸರಮಾಲೆಯೇ ನಿನ್ನ ಕುತ್ತಿಗೆ ಸುತ್ತಿಕೊಂಡಿರಬೇಕಾದರೆ ಬಿಜೆಪಿ ಮುಖಂಡರನ್ನು ಬೆದರಿಸುತ್ತೀಯಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡುಕ ಗಂಡನಿಗೆ ಹೋಲಿಸಿದ ಈಶ್ವರಪ್ಪ:
“ರಾಜ್ಯ ಸರ್ಕಾರದ ಲೆಕ್ಕ ಕೇಳಲು ಅಮಿತ್‌ ಶಾ ಯಾರು’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರನ್ನು ಕೆ.ಎಸ್‌.ಈಶ್ವರಪ್ಪ “ಪತ್ನಿಗೆ ಹೊಡೆಯುವ ಕುಡುಕ ಗಂಡ’ನಿಗೆ ಹೋಲಿಸಿ, ವ್ಯಂಗ್ಯವಾಡಿದರು. ಪ್ರತಿಭಟನೆ ವೇಳೆ ಮಾತನಾಡಿದ ಈಶ್ವರಪ್ಪ, “ಪತ್ನಿ ತನ್ನ ಗಂಡನಿಗೆ ಬೆಳಗ್ಗೆ 100 ರೂ. ಕೊಡುತ್ತಾಳೆ. ಆ ಹಣದಲ್ಲಿ ಕುಡಿದು ಬರುವ ಆತ ಸಂಜೆ ಮತ್ತೆ ಹಣ ಕೇಳುತ್ತಾನೆ. ಆಗ ಪತ್ನಿ ಬೆಳಗ್ಗೆ ಕೊಟ್ಟ ಹಣ
ಏನಾಯಿತು ಎಂದು ಪ್ರಶ್ನಿಸಿದರೆ ಕುಡುಕ ಗಂಡ ಅದಕ್ಕೆ ಉತ್ತರಿಸುವ ಬದಲು ಪತ್ನಿಗೇ ಹೊಡೆಯುತ್ತಾನೆ. ಅಮಿತ್‌ ಶಾ ಅವರು ಲೆಕ್ಕ ಕೇಳಿದಾಗ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಇದೇ ರೀತಿ ಇದೆ’ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next