Advertisement

ಯಡಿಯೂರಪ್ಪನವರಿಗೆ ಮಾನ-ಮರ್ಯಾದೆ ಇದೆಯೇ?

08:13 AM Oct 23, 2017 | |

ಮಂಗಳೂರು: “ಜೈಲಿಗೆ ಹೋಗಿ ಬಂದಿರುವ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾನ-ಮರ್ಯಾದೆ ಇದ್ದರೆ ನನ್ನ ವಿರುದ್ಧ ಕಲ್ಲಿದ್ದಲು ಹಗರಣ ಆರೋಪ ಮಾಡುತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧದ ಕಲ್ಲಿದ್ದಲು ಹಗರಣ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 

Advertisement

ರವಿವಾರ ಬಂಟ್ವಾಳದಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಯಡಿಯೂರಪ್ಪ ಅವರು ಮಾತೆತ್ತಿದರೆ ನಾವು ಸೀರೆ ಕೊಟ್ಟಿದ್ದೇವೆ, ಸೈಕಲ್‌ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಇದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಭ್ರಷ್ಟಾಚಾರದಲ್ಲಿ ಜೈಲಿಗೂ ಹೋಗಿಬಂದರು. ಇದೀಗ 15 ದಿನಗಳಿಂದ ಸರಕಾರದ ಮೇಲೆ ಹೊಸ ಹೊಸ ಆರೋಪದ ರೀಲು ಬಿಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಡೋಂಗಿಗಳ ಪಕ್ಷ
ಬಿಜೆಪಿ ಡೋಂಗಿಗಳ ಪಕ್ಷ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಬಿಜೆಪಿಯವರು ಬರೇ ಮಾತುಗಳಲ್ಲೇ ಕಾಲ ಕಳೆಯುವವರು. ವಾಸ್ತವದಲ್ಲಿ ಯಾವುದೂ ಆಗುವುದಿಲ್ಲ. “ಅಚ್ಛೇ ದಿನ್‌ ಆಯೇಗಾ’ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಜನಸಾಮಾನ್ಯರಿಗೆ ಅಚ್ಛೇ ದಿನ್‌ ಬರಲೇ ಇಲ್ಲ. ಉದ್ಯಮಿಗಳಿಗೆ, ಅಮಿತ್‌ ಶಾ ಪುತ್ರ ಜಯ್‌ ಶಾ ಅವರಿಗೆ ಮಾತ್ರ ಅಚ್ಛೇ ದಿನ್‌ ಬಂದಿದೆ ಎಂದು ಲೇವಡಿ ಮಾಡಿದರು.

ಬಿಜೆಪಿಯಿಂದ ಕೋಮುವಾದ
ಬಿಜೆಪಿ, ಸಂಘಪರಿವಾರ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ. ಭಾವನಾತ್ಮಕ ವಿಚಾರಗಳ ಮೇಲೆ ಮತಗಳಿಸುವ ಕೆಲಸ ಯಾರೂ ಕೂಡ ಮಾಡಬಾರದು. ಜಿಲ್ಲೆಯ ಪ್ರಜ್ಞಾವಂತ ಜನತೆ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡಬಾರದು. ಕೋಮುವಾದಿ ಶಕ್ತಿಗಳ ಜತೆ ಯಾವುದೇ ಕಾರಣಕ್ಕೂ ರಾಜಿ ಇಲ್ಲ . ಜಾತಿವಾದಿ, ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಬದ್ಧರಾಗಿದ್ದೇವೆ ಎಂದರು. ಸಮಾಜ ಒಡೆವ ಕೋಮವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಜಾತ್ಯತೀತ ಶಕ್ತಿಗಳು ಮಾಡಬೇಕು ಎಂದು ಕರೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next