Advertisement

ನೂತನ ಎಸ್ಪಿಯಾಗಿ ಯತೀಶ್‌ ನೇಮಕ

02:56 PM Nov 01, 2021 | Team Udayavani |

ಮಂಡ್ಯ: ಕಳೆದ ಅ.21ರಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿಯಾಗಿದ್ದ ಡಾ.ಎಂ.ಅಶ್ವಿ‌ನಿ ಅವರನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ನೂತನ ಎಸ್ಪಿಯಾಗಿ ನೇಮಕವಾಗಿದ್ದ ಸುಮನ್‌ ಡಿ.ಪನ್ನೇಕರ್‌ ಅ ಧಿಕಾರ ಸ್ವೀಕಾರ ಮಾಡುವ ಮುನ್ನವೇ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಗದಗ್‌ನ ಎಸ್ಪಿಯಾಗಿದ್ದ ಎನ್‌.ಯತೀಶ್‌ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಸರ್ಕಾರದ ಆದೇಶದಲ್ಲಿ ಮಂಡ್ಯ ಎಸ್ಪಿಯಾಗಿ ನೇಮಕಗೊಂಡಿದ್ದ ಸುಮನ್‌ ಡಿ.ಪನ್ನೇಕರ್‌ ಅವರನ್ನು ಉತ್ತರ ಕನ್ನಡದ ಪೊಲೀಸ್‌ ವರಿಷ್ಠಾ ಧಿಕಾರಿಯಾಗಿ ನೇಮಿಸಿದ್ದು, ಮಂಡ್ಯ ಎಸ್ಪಿಯಾಗಿ ಗದಗ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್‌.ಯತೀಶ್‌ ಅವರನ್ನು ನೇಮಿಸಲಾಗಿದ್ದು, ತಕ್ಷಣ ಸ್ಥಳ ನಿಯೋಜಿಸಿಕೊಳ್ಳುವಂತೆ ಸೂಚಿಸಿದೆ.

ವಿವಾದಗಳಿಂದಲೇ ಸುದ್ದಿ ಮಾಡಿದ್ದ ಮಂಡ್ಯ ಎಸ್ಪಿ ಡಾ.ಅಶ್ವಿ‌ನಿ ಅವರನ್ನು ವರ್ಗಾ ವಣೆ ಮಾಡಿದ್ದ ಸರ್ಕಾರ ಅವರ ಜಾಗಕ್ಕೆ ಅ.21ರಂದು ಮೈಸೂರಿ ನ ಪೊಲೀಸ್‌ ತರಬೇತಿ ಕೇಂದ್ರದ ಅಧಿಧೀಕ್ಷಕರಾಗಿದ್ದ ಸುಮನ್‌ ಡಿ.ಪನ್ನೇಕರ್‌ ಅವರನ್ನು ನೇಮಿಸಲಾಗಿತ್ತು. ಆದರೆ ನೇಮಕವಾಗಿ ಹತ್ತು ದಿನ ಕಳೆದರೂ ಸುಮನ್‌ ಅ ಧಿಕಾರ ಸ್ವೀಕರಿಸಿರಲಿಲ್ಲ. ಇದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಈ ನಡುವೆ ಶನಿವಾರ ಸಂಜೆ ದಿಢೀರನೇ ಅ ಧಿಕಾರ ಸ್ವೀಕರಿಸದ ಕೇವಲ ಹತ್ತು ದಿನಗಳ ಹಿಂದಷ್ಟೇ ನೇಮಕವಾಗಿದ್ದ ಸುಮನ್‌ ಅವರನ್ನು ಸಹ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಯತೀಶ್‌ ಅವರನ್ನು ನೇಮಕ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next