Advertisement

ಚಿನ್ಮಯ ಸಾಗರಜಿ ಮುನಿಗಳಿಂದ ಯಮ ಸಲ್ಲೇಖನ ವ್ರತಾರಂಭ

10:39 PM Oct 12, 2019 | Lakshmi GovindaRaju |

ಕಾಗವಾಡ: ಜೀವನದುದ್ದಕ್ಕೂ ಆದಿವಾಸಿ, ವಿವಿಧ ಸಮುದಾಯಗಳ ಏಳ್ಗೆಗಾಗಿ ಶ್ರಮಿಸಿರುವ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ನೆಲೆಸಿರುವ ರಾಷ್ಟ್ರಸಂತ ಚಿನ್ಮಯಸಾಗರಜಿ ಮಹಾರಾಜರು ಶನಿವಾರ ಬೆಳಗ್ಗೆ ಯಮ ಸಲ್ಲೇಖನ ವ್ರತ ಘೋಷಣೆ ಮಾಡುವ ಮೂಲಕ ಧರ್ಮ ತತ್ವಗಳ ಅನುಸಾರ ಶರೀರ ತ್ಯಾಗ ಮಾಡಲಿದ್ದಾರೆ. ಯಮ ಸಲ್ಲೇಖನ ವ್ರತ ಜೈನ ಧರ್ಮೀಯ ಮುನಿಗಳು ಕೈಗೊಳ್ಳುವ ಅತ್ಯಂತ ಕಠಿಣ ವ್ರತ.

Advertisement

ಜು.22ರಿಂದ ಕಠಿಣ ವ್ರತ ಕೈಗೊಂಡಿರುವ ಚಿನ್ಮಯಸಾಗರಜಿ ಮಹಾರಾಜರು, ಕೇವಲ ನೀರನ್ನು ಮಾತ್ರ ಸೇವಿಸುತ್ತಿದ್ದರು. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ಶನಿವಾರ ಬೆಳಗ್ಗೆಯಿಂದ ನೀರು ಕೂಡ ಸೇವಿಸದೆ ವ್ರತ ಪ್ರಾರಂಭಿಸಿದ್ದಾರೆ. ಸುದ್ದಿ ತಿಳಿದು ದೇಶದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಕಾಗವಾಡ ತಾಲೂಕಿನ ಜುಗೂಳ ಗ್ರಾಮಕ್ಕೆ ಹರಿದು ಬರುತ್ತಿರುವುದರಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next