Advertisement

ರಭಸದ ನೀರಿನಲ್ಲಿ ಸೇತುವೆ ದಾರಿ ಕಾಣದೇ ಲಾರಿ ನದಿಗೆ ಪಲ್ಟಿ; ಐವರು ಪತ್ತೆ, ಓರ್ವನಿಗಾಗಿ ಶೋಧ

08:40 PM Aug 24, 2022 | Team Udayavani |

ಯಲ್ಲಾಪುರ: ಸೇತುವೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಕ್ಕ ಲಾರಿಯೊಂದು ಸೇತುವೆಯ ಮೇಲಿಂದ ನದಿಗೆ ಉರುಳಿ ಬಿದ್ದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಫಣಸಗುಳಿ ಸೇತುವೆಯ ಮೇಲೆ ಬುಧವಾರ ಸಂಜೆ ನಡೆದಿದೆ.

Advertisement

ಹೆಗ್ಗಾರಿನಲ್ಲಿ ಚಿರೇಕಲ್ಲುಗಳನ್ನು ಇಳಿಸಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದ್ದು, ನದಿಯ ನೀರು ಸೇತುವೆ ಮೇಲಿಂದ ರಭಸವಾಗಿ ಹರಿಯುತ್ತಿದ್ದ ಸಂದರ್ಭ ಲಾರಿಯ ಚಾಲಕ ಸೇತುವೆಯ ಮೇಲಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ರಭಸದ ನೀರಿನಲ್ಲಿ ಸೇತುವೆಯ ದಾರಿ ಕಾಣದೇ ನದಿಯ ಕೆಳಭಾಗದಲ್ಲಿ ಮಗುಚಿ ಬಿದ್ದಿದೆ.

ಲಾರಿಯಲ್ಲಿ ಕೂಲಿಗಳು, ಚಾಲಕ ಸೇರಿ ಒಟ್ಟು ಆರು ಜನರಿದ್ದರು ಎನ್ನಲಾಗಿದ್ದು, ಐವರನ್ನು ಈಗಾಗಲೇ ರಕ್ಷಿಸಲಾಗಿದೆ. ಇನ್ನೊಬ್ಬರ ಶೋಧ ಕಾರ್ಯ ಮುಂದುವರೆದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next