Advertisement

ಯಲ್ಲಾಪುರ : ಕಾರು ತಡೆದು ದುಷ್ಕರ್ಮಿಗಳಿಂದ 14 ಲಕ್ಷ ಮೌಲ್ಯದ ನಗ ನಗದು ದರೋಡೆ

10:59 PM Jun 15, 2022 | Team Udayavani |

ಯಲ್ಲಾಪುರ : ಕಾರನ್ನು ತಡೆದು ದರೋಡೆಕೋರರ ತಂಡವೊಂದು ಸುಮಾರು 14 ಲಕ್ಷ ಮೌಲ್ಯದ ನಗ ನಗದು ದೋಚಿ ಪರಾರಿಯಾದ ಘಟನೆ ತಾಲೂಕಿನ ಮಂಚಿಕೇರಿಯ ಬಿಳಕಿ ಗ್ರಾಮದ ಶಿಡ್ಲಗುಂಡಿಗೆ ಹೋಗುವ ರಸ್ತೆಯಲ್ಲಿ ನಡೆದಿದೆ.

Advertisement

ಈ ಕುರಿತು ಅಂತೋನಿ ದಿವ್ಯಕುಮಾರ ಅವರ ತಂದೆ ಪ್ರಾನ್ಸಿಸ್ ಪೆರೇರಾ ಮುಂಬಯಿ ಠಾಣೆಗೆ ದೂರು ನೀಡಿದ್ದಾರೆ. ಸ್ನೇಹಿತರೊಂದಿಗೆ ಎರಡು ಕಾರುಗಳಲ್ಲಿ ಹೋಗುತ್ತಿದ್ದಾಗ, ಬಿಳಕಿ ಸಮೀಪ ಶಿಡ್ಲಗುಂಡಿಗೆ ಹೋಗುವ ರಸ್ತೆಯಲ್ಲಿ, ಬೈಕಿನಲ್ಲಿ ಬಂದ 4-5 ಜನರ ತಂಡ ಕಾರನ್ನು ಅಡ್ಡಗಟ್ಟಿ ತಡೆದು, ಕಾರಿನಲ್ಲಿದ್ದವರಿಗೆ ಹಲ್ಲೆ ನಡೆಸಿ, ಕತ್ತಿ ಹಾಗೂ ದೊಣ್ಣೆಯನ್ನು ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ.

ಈ ವೇಳೆ ಕಾರಿನೊಳಗೆ ಬ್ಯಾಗಿನಲ್ಲಿ ಇಟ್ಟಿದ್ದ 9 ಲಕ್ಷ 3300 ಸಾವಿರ ರೂ ನಗದು ಹಣ, 1 ಲಕ್ಷ ರೂ ಮೌಲ್ಯದ ಐಫೋನ್, 2 ಮೋಬೈಲ್‍ಗಳು, 25000 ರೂ ಮೌಲ್ಯದ ಪವರ್ ಬ್ಯಾಂಕ್, ದೂರುದಾರರ ಕೈಬೆರಳಿನಲ್ಲಿ ಇದ್ದ 2 ಲಕ್ಷ ರೂ ಮೌಲ್ಯದ ನವರತ್ನ ಉಂಗುರ, ಇವರ ಸ್ನೇಹಿತರ ಬಳಿ ಇದ್ದ ಮೂರು ಮೊಬೈಲ್ ಗಳು ಸೇರಿದಂತೆ ಒಟ್ಟೂ 14 ಲಕ್ಷ 30 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ ಮೂವರು ಆರೋಪಿಗಳು ಬೈಕಿನಲ್ಲಿ ಪರಾರಿಯಾಗಿದ್ದು, ಇನ್ನುಳಿದ ಆರೋಪಿಗಳು ಕಾಡಿನಲ್ಲಿ ಓಡಿಹೋಗಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಣಜಿ ಟ್ರೋಫಿ ಸೆಮಿಫೈನಲ್‌: ತಮೋರೆ ಶತಕ; ಮುಂಬಯಿ ಮೇಲುಗೈ; ಉತ್ತರ ಪ್ರದೇಶ ಕುಸಿತ

Advertisement
Advertisement

Udayavani is now on Telegram. Click here to join our channel and stay updated with the latest news.

Next