Advertisement

Yellapur; ಅರಬೈಲ್‌ ಘಟ್ಟದಲ್ಲಿ ಗುಡ್ಡ ಕುಸಿತ: ಸಂಚಾರಕ್ಕೆ ಅಡ್ಡಿ

12:31 PM Jul 09, 2023 | Team Udayavani |

ಯಲ್ಲಾಪುರ: ತಾಲೂಕಿನ ರಾ.ಹೆದ್ದಾರಿ ಅರಬೈಲ್ ಘಟ್ಟದಲ್ಲಿ ರವಿವಾರ ಹೆದ್ದಾರಿ ಮೇಲೆ ಗುಡ್ಡಕುಸಿದು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು. ಕೆಲವು ಗಂಟೆಯ ಬಳಿಕ ಜೆಸಿಬಿ ಬಳಸಿ ಮಣ್ಣನ್ನು ತೆರವುಗೊಳಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

ಸದ್ಯ ಸಂಚಾರಕ್ಕೆ ತೆರವು ಮಾಡಿಕೊಟ್ಟಿದ್ದರೂ ಧರೆಯ ಮಣ್ಣು ಕುಸಿಯುತ್ತಲೇ ಇದೆ. ಪ್ರತಿವರ್ಷವೂ ಈ ಪ್ರದೇಶದಲ್ಲಿ ಈ ವೇಳೆಗೆ ಕುಸಿಯುತ್ತಿದ್ದು ಬೇಸಿಗೆಯಲ್ಲಿ ಧರೆಯ ಮಣ್ಣನ್ನು ತೆಗೆದು ಹಾಕದಿರುವುದೇ ಈ ತರಹ ಮಳೆಗಾಲದ ಅವಧಿಯಲ್ಲಿ ಪದೇ ಧರೆ ಕುಸಿದು ಹೆದ್ದಾರಿ ಮೇಲೆ ಅಪ್ಪಳಿಸಲು ಕಾರಣವಾಗಿದೆ.ಇದರಿಂದ ಜನರು ಪರದಾಡುವಂತಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next