Advertisement
2014ನೇ ಸಾಲಿನ ಪುಸ್ತಕ ಬಹುಮಾನಕ್ಕೆ ದಕ್ಷಿಣ ಕನ್ನಡದ ಸೂರತ್ಕಲ್ನ ಸೇರಾಜೆ ಸೀತಾರಾಮ ಭಟ್ಟ(ಯಕ್ಷಗಾನ ಪ್ರಸಂಗ ಪಂಚಕ), ಪುತ್ತೂರಿನ ರವಿಶಂಕರ್ ವಳಕ್ಕುಂಜ (ಯಕ್ಷಗಾನ ವಾಚಿಕ ಸಮಾರಾಧನೆ) ಅವರ ಕೃತಿಗಳು ಆಯ್ಕೆಯಾಗಿವೆ. 2015ನೇ ಸಾಲಿನಲ್ಲಿ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಡಾ.ನಾಗವೇಣಿ ಮಂಚಿ (ಬಲಿಪ ಗಾನಯಾನ) ಕೃತಿ ಮತ್ತು 2016ನೇ ಸಾಲಿನಲ್ಲಿ ಕಾಸರಗೋಡಿನ ಕುಂಬ್ಳೆಯ ಶೇಡಿಗುಮ್ಮೆ ವಾಸುದೇವ ಭಟ್ಟ (ಯಕ್ಷ ಕುಸುಮ), ಉಡುಪಿ ಜಿಲ್ಲೆಯ ಡಾ.ಪಾದೇಕಲ್ಲು ವಿಷ್ಣು ಭಟ್ಟ (ಯಕ್ಷಗಾನಾಧ್ಯಯನ), ಮಂಗಳೂರಿನ ಬೊಟ್ಟೆಕೆರೆ ಪುರುಷೋತ್ತಮ ಪೂಂಜರ (ಅಂಬುರಹ-ಲವ) ಅವರ ಕೃತಿಗಳನ್ನು
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಎಂ.ಆರ್.ರಂಗನಾಥರಾವ್ ಮತ್ತು ಮಂಡ್ಯ ಜಿಲ್ಲೆ ನಾಗಮಂಗಲದ ತಿಮ್ಮಪ್ಪಾಚಾರ್ಯ (ಸೂತ್ರದಗೊಂಬೆಯಾಟ) ಅವರ ಜೀವನ ಸಾಧನೆ ಗುರುತಿಸಿ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಸಾಧಕರ ಸಾಕ್ಷ್ಯಚಿತ್ರಗಳನ್ನು
ನಿರ್ಮಿಸಲಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ
ಬೆಳಗಲ್ಲು ವೀರಣ್ಣ, 2014ರಿಂದ 16ರವರೆಗಿನ ಪುಸ್ತಕ ಪ್ರಶಸ್ತಿಗಳ ವಿತರಣೆ ಮತ್ತು ಸಾಕ್ಷ್ಯಚಿತ್ರಗಳ ಬಿಡುಗಡೆ ಸಮಾರಂಭ ಆ.5ರಂದು ಸಂಜೆ 5ಕ್ಕೆ ಬಾಗಲಕೋಟೆಯ ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಮಾರಂಭ ಉದ್ಘಾಟಿಸುವರು. ಬಾಗಲಕೋಟೆ
ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಕಾಡೆಮಿ ಸಾಧನೆ ಕುರಿತ ಪುಸ್ತಕ ಬಿಡುಗಡೆ ಮಾಡುವರು. ಜಾನಪದ ತಜ್ಞ ಡಾ.ಶ್ರೀರಾಮ ಇಟ್ಟಣ್ಣನವರ್ ನಿಜಗುಣ ಶಿವಯೋಗಿ ಪುಸ್ತಕ ಬಿಡುಗಡೆ ಮಾಡುವರು ಎಂದು ತಿಳಿಸಿದರು.
Related Articles
(ಡಪ್ಪಿನಾಟ-ಸಣ್ಣಾಟ) ಪುಸ್ತಕ ಬಿಡಗಡೆಯಾಗಲಿದೆ. ಬಳಿಕ ನಾಡೋಜ ಎಲ್ಲವ್ವ ರೊಡ್ಡಪ್ಪನವರ್ ಅವರ ಶ್ರೀಕೃಷ್ಣ ಪಾರಿಜಾತ, ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಲಲಿತತ್ವ ರಾ.ಪಾತ್ರೋಟ ಅವರ “ಸಂಗ್ಯಾಬಾಳ್ಯ’ ಸಣ್ಣಾಟ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಸದಸ್ಯ ಬಿ.ಎಂ.ಗುರುನಾಥ್ ಇದ್ದರು.
Advertisement