Advertisement

ಬಳ್ಕೂರಿನಲ್ಲಿ ರಸ್ತೆ ಅಪಘಾತ: ಯಕ್ಷಗಾನ ಭಾಗವತ  ಸಾವು

05:17 AM Dec 31, 2018 | |

ಕುಂದಾಪುರ: ಶಿವಮೊಗ್ಗ – ಕುಂದಾಪುರ ರಾಜ್ಯ ಹೆದ್ದಾರಿಯ ಬಳ್ಕೂರಿನಲ್ಲಿ ಶನಿವಾರ ರಾತ್ರಿ 9.45ರ ಸುಮಾರಿಗೆ ಬೊಲೆರೋ ಮತ್ತು ಬೈಕ್‌  ಢಿಕ್ಕಿಯಾಗಿ ಸಾವಿಗೀಡಾದವರು ಕಮಲಶಿಲೆ ಬಿ ಮೇಳದ ಭಾಗವತ ರವಿರಾಜ ಪೂಜಾರಿ (26) ಅವರಾಗಿದ್ದು, ಸ್ಥಳದಲ್ಲಿ ಸ್ವಲ್ಪ ಹೊತ್ತು ಗೊಂದಲದ ಸ್ಥಿತಿ ನೆಲೆಯಾಗಿತ್ತು.

Advertisement

ಸಿದ್ದಾಪುರ ಗ್ರಾಮದ ಜನ್ಸಾಲೆಯ ಲಕ್ಷ್ಮಣ ಪೂಜಾರಿ ಅವರ ಇಬ್ಬರು ಪುತ್ರರಲ್ಲಿ ಕಿರಿಯವರಾಗಿದ್ದ ಇವರು ಅಯ್ಯಪ್ಪ ಮಾಲೆ ಧರಿಸಿದ್ದರು. ಶನಿವಾರ ಹುಣ್ಸೆಮಕ್ಕಿಯಲ್ಲಿ ನಡೆದ ಯಕ್ಷಗಾನದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಅಪ ಘಾತ ಸಂಭವಿಸಿದೆ. ಅವರು ಭಾಗವತಿಕೆಯೊಂದಿಗೆ ಸಿದ್ದಾಪುರದಲ್ಲಿ ಸ್ಟಿಕ್ಕರ್‌ ಕಟ್ಟಿಂಗ್‌ ಕೆಲಸವನ್ನೂ ಮಾಡುತ್ತಿದ್ದರು. 

ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ
ಢಿಕ್ಕಿಯಾದ ಬೊಲೆರೋ ವಾಹನದ ಕುರಿತು ಸ್ಥಳೀಯರು ಕೆಲವು ರೀತಿಯ ಸಂಶಯ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಜನರು ನೆರೆದು ಸ್ವಲ್ಪ ಉದ್ವಿಗ್ನತೆ ನೆಲೆಯಾಗಿತ್ತು. ಬಳಿಕ ಕುಂದಾಪುರ ಡಿವೈಎಸ್‌ಪಿ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ, ಕುಂದಾಪುರ, ಕಂಡೂರು, ಸಂಚಾರ ಪೊಲೀಸ್‌ ಉಪ ನಿರೀಕ್ಷಕರು ಹಾಗೂ ಸಿಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಬೊಲೆರೋ  ಚಾಲಕ  ಝಾಕಿರ್‌ ಹುಸೇನ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next