Advertisement

ಕಲಿಕೆಯಾಗಿ ಯಕ್ಷಗಾನ: ಪ್ರೊ|ಯಡಪಡಿತ್ತಾಯ ಆಶಯ

01:54 AM Sep 27, 2021 | Team Udayavani |

ಉಡುಪಿ: ಯಕ್ಷಗಾನ ಕಲೆಯನ್ನು ಕಲಿಕೆಯಾಗಿ ಅಳವಡಿಸಿ ಕೊಳ್ಳಬೇಕಾಗಿದೆ ಎಂಬ ಆಶಯವನ್ನು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ. ಎಸ್‌.ಯಡಪಡಿತ್ತಾಯ ವ್ಯಕ್ತ ಪಡಿಸಿದ್ದಾರೆ.

Advertisement

ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ರವಿವಾರ ರಾಜಾಂಗಣದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ವಿ.ವಿ.ಯ ಯಕ್ಷಗಾನ ಪೀಠದ ದಶಮಾನೋತ್ಸವ ವನ್ನು ಆಚರಿಸಲಾಗುತ್ತಿದೆ. ಕಲಿಕೆಯಾಗಿ ಯಕ್ಷಗಾನವನ್ನು ಅಳವಡಿಸುವಲ್ಲಿ ವಿದ್ವಾಂಸರು, ಕಲೆಗಾಗಿ ಶ್ರಮಿಸುತ್ತಿರುವ ಕಲಾರಂಗದಂತಹ ಸಂಘ ಸಂಸ್ಥೆಗಳ ಸಹಕಾರ ಅಗತ್ಯ. ಯಕ್ಷಗಾನ ಶಿಕ್ಷಣ, ಪ್ರಕಾಶನ, ಸಂಶೋಧನೆಗಳಲ್ಲಿ ವಿ.ವಿ. ಸಹಕಾರವನ್ನು ನೀಡಲಿದೆ ಎಂದು ಯಡಪಡಿತ್ತಾಯ ಹೇಳಿದರು.

ತೆಂಕುತಿಟ್ಟಿನ ಯಕ್ಷಗಾನ ನಾಟ್ಯಾ ಚಾರ್ಯ ಕರ್ಗಲ್ಲು ವಿಶ್ವೇಶ್ವರ ಭಟ್‌ ಅವರಿಗೆ 40,000 ರೂ. ನಗದು ಹೊಂದಿರುವ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ತಾಳಮದ್ದಲೆ ಅರ್ಥಧಾರಿ, ಯಕ್ಷಗಾನ ಸಂಘಟಕ ವಾಸುದೇವ ರಾವ್‌ ಸುರತ್ಕಲ್‌ ಅವರಿಗೆ 20,000 ರೂ. ನಗದು ಹೊಂದಿರುವ ಮಟ್ಟಿ ಮುರಲೀಧರ ರಾವ್‌ ಪ್ರಶಸ್ತಿ, ತಾಳಮದ್ದಲೆ ಅರ್ಥಧಾರಿ, ಸಂಸ್ಕೃತ ವಿದ್ವಾಂಸ ವಿ| ಉಮಾಕಾಂತ ಭಟ್‌ ಕೆರೇಕೈ ಅವರಿಗೆ 20,000 ರೂ. ನಗದು ಹೊಂದಿರುವ ಪೆರ್ಲ ಪಂಡಿತ ಕೃಷ್ಣ ಭಟ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರು ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ:ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

Advertisement

ಪ್ರಶಸ್ತಿ ಪ್ರಾಯೋಜಿಸಿರುವ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಕೃಷ್ಣ ಪ್ರಸಾದ ಅಡ್ಯಂತಾಯ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ಸ್ವಾಗತಿಸಿ ಕಾರ್ಯ ದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಎಚ್‌.ಎನ್‌. ಶೃಂಗೇಶ್ವರ ವಂದಿಸಿದರು. ಉಪಾಧ್ಯಕ್ಷರಾದ ಎಸ್‌.ವಿ. ಭಟ್‌, ಪಳ್ಳಿ ಕಿಶನ್‌ ಹೆಗ್ಡೆ ಉಪಸ್ಥಿತರಿದ್ದರು.

ಗಂಗಾ ಸ್ಥಾನ-ಗಂಗಾ ಸ್ನಾನ
ಪ್ರಶಸ್ತಿ ಪ್ರದಾನ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಜೀವಿತಾವಧಿಯಲ್ಲಿ ಅಗತ್ಯವಾಗಿ ತಿಳಿಯಬೇಕಾದದ್ದು ಭಗವಂತನನ್ನು. ಇದಕ್ಕೆ ಬೇರೆ ಬೇರೆ ವೇದಿಕೆಗಳನ್ನು ಸೃಷ್ಟಿಸಿದವರು ನಮ್ಮ ಪೂರ್ವಜರು. ಯಕ್ಷಗಾನ, ತಾಳಮದ್ದಲೆಗಳೂ ಇಂತಹ ವೇದಿಕೆಗಳು. ಸಾಮಾನ್ಯ ಜನರೂ ಇಂತಹ ವೇದಿಕೆಗಳಲ್ಲಿ ಸ್ವಲ್ಪ ಸಮಯ ಭಾಗವಹಿಸಿದರೂ ಲಾಭಕರವಾಗಿದೆ. ಕಲಾವಿದರು ಉತ್ತಮ ಸಮಾಜ ಕಟ್ಟುವ ಕೆಲಸಗಳಲ್ಲಿ ತೊಡಗಿದ್ದಾರೆ. ಹೃದಯ ಗಂಗೆಯಲ್ಲಿ ಗಂಗಾ ಸ್ನಾನ ಮಾಡಿಸುವ ಇವರ ಪರಿಶ್ರಮ ಅಮೂಲ್ಯ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next