Advertisement

ರತ್ನಾಕರ ಭಟ್ಟರಿಗೆ “ಯಕ್ಷ ಸೇವಾ ರತ್ನ”ಪ್ರಶಸ್ತಿ

06:05 PM Oct 13, 2021 | Team Udayavani |

ಶಿರಸಿ: ತಾಲೂಕಿನ ಬಾಳಗಾರ ಜೋಗಿಮನೆಯಲ್ಲಿ ಜೋಗಿಮನೆ ಬಳಗದ ವತಿಯಿಂದ ಅಕ್ಟೋಬರ್ 15 ರಂದು  ಆಯೋಜಿಸಿರುವ “ಪಂಚವಟಿ-ಮಾಯಾಮೃಗ” ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಕಾನಸೂರಿನ ರತ್ನಾಕರ ಭಟ್ಟರಿಗೆ “ಯಕ್ಷ ಸೇವಾ ರತ್ನ” ಪ್ರಶಿಸ್ತಿ ನೀಡಿ ಗೌರವಿಸಲಾಗುತ್ತಿದೆ.

Advertisement

ಕಳೆದ ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಸೇವಾ ರತ್ನ ಯಕ್ಷಗಾನ ಮಂಡಳಿಯ ಮೂಲಕ ನಾಡಿನ ವಿವಿಧ ಭಾಗಗಳಲ್ಲಿ ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮ ಸಂಘಟಿಸಿ ಪಾರಂಪರಿಕ ಯಕ್ಷಗಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿ ದಯಪಾಲಿಸಲಾಗುತ್ತಿದೆ ಎಂದು ಸಂಘಟಕರಾದ ಜೋಗಿಮನೆ ಬಳಗದ  ಡಾ.ಬಾಲಕೃಷ್ಣ ಹೆಗಡೆ ಮತ್ತು ಅನಂತ ರಾಮಕೃಷ್ಣ ಹೆಗಡೆ ತಿಳಿಸಿದ್ದಾರೆ.

ರತ್ನಾಕರ ಭಟ್ಟ ಅವರು ಪತ್ರಕರ್ತ ರಾಗಿಯೂ‌ ಕೆಲಸ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next