Advertisement

Sringeri ಶ್ರೀಮಠಕ್ಕೆ ಯದುವೀರ್ ಒಡೆಯರ್ ಭೇಟಿ; ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ

05:33 PM Mar 10, 2024 | Team Udayavani |

ಚಿಕ್ಕಮಗಳೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ  ಬಿಜೆಪಿ ಅಭ್ಯರ್ಥಿಯಯಾಗಿ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೆ ಶೃಂಗೇರಿ ಶ್ರೀಮಠಕ್ಕೆ ಮೈಸೂರು ರಾಜವಂಶಸ್ಥ  ಯದುವೀರ್ ಒಡೆಯರ್ ಅವರು ಭಾನುವಾರ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

Advertisement

ಶಾರದಾಂಬೆ ದರ್ಶನ ಪಡೆದ ಬಳಿಕ ಕಿರಿಯ ಶ್ರೀಗಳಾದ ಜಗದ್ಗರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರ ಆರ್ಶೀವಾದ ಪಡೆದರು.

ಶೃಂಗೇರಿ ಶ್ರೀಮಠಕ್ಕೂ ಮೈಸೂರು ಸಂಸ್ಥಾನಕ್ಕೂ ಐತಿಹಾಸಿಕ ಧಾರ್ಮಿಕ ನಂಟು ಇದ್ದು ಈ ಹಿಂದೆಯೂ ಹಲವು ಕಾರ್ಯಕ್ರಮಗಳಿಗೆ ಮೈಸೂರು ರಾಜವಂಶಸ್ಥರು‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ಮೈಸೂರು ಬಿಜೆಪಿ ಟಿಕೆಟ್ ಹೆಸರು ಕೇಳಿ ಬಂದಿರುವ ವೇಳೆಯಲ್ಲೇ ಶೃಂಗೇರಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next