Advertisement

ಪೊಲೀಸ್‌-ಆರೋಗ್ಯ ಸಿಬ್ಬಂದಿಗೆ ಸನ್ಮಾನ

05:05 PM Apr 26, 2020 | Naveen |

ಯಡ್ರಾಮಿ: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಾಗರಹಳ್ಳಿಯ ಡಾ| ಅಂಬೇಡ್ಕರ್‌ ವೃತ್ತದ ಬಳಿ ಇರುವ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಳ್ಳಿ -ನಾಗರಹಳ್ಳಿ ಯುವಕರು ಸನ್ಮಾನಿಸಿದರು.

Advertisement

ಚೆಕ್‌ಪೋಸ್ಟ್‌ನಲ್ಲಿ ನಿರಂತರ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಪೊಲೀಸರು, ಆರೋಗ್ಯ ಸಿಬ್ಬಂದಿ ಮನೆ, ಕುಟುಂಬಸ್ಥರ ಮುಖವೇ ನೋಡದಂತಾಗಿದೆ. ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದಲೂ ರಸ್ತೆಯ ಪಕ್ಕದಲ್ಲಿಯೇ ತಮ್ಮ ಹಸಿವು, ನೀರಡಿಕೆ ಇಂಗಿಸಿಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಗಲು ರಾತ್ರಿ ಎನ್ನದೆ ಕೊರೊನಾ ಬಂದೋಬಸ್ತ್ಗಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್‌ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸ್ವಯಂ ಸೇವಕರಿಗೆ ಗ್ರಾಮದ ಯುವ ಜನತೆ ಉಪಾಹಾರದ ವ್ಯವಸ್ಥೆ ಮಾಡಿ, ಅವರಿಗೆ ಪ್ರೋತ್ಸಾಹಿಸಿದರು.

ಸಿಬ್ಬಂದಿಯ ಪ್ರಾಮಾಣಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ| ಚನ್ನವೀರಪ್ಪ, ಎಸೈ ಗುರಣ್ಣ, ಪೊಲೀಸ್‌ ಸಿಬ್ಬಂದಿಗಳಾದ ಶಾಂತೇಶ, ವಿಠ್ಠಲ ಹೂಗಾರ, ಭೀಮಾಶಂಕರ ಅಲ್ಲಾಪುರ, ಸುರೇಶ ಸಾಹು ನಾಗರಾಳ, ಬಸಲಿಂಗ ಸಾಹು ಕುರುಳಗೇರಾ, ಬಸವರಾಜ, ಪ್ರವೀಣ ನಾಗರಹಳ್ಳಿ, ಸಿದ್ಧಯ್ಯ ಚಿಕ್ಕಮಠ, ಹುಸೇನಿ ಬೂದನೂರ, ಕಿರಣ ತಾಳಿಕೋಟಿ, ರುದ್ರಗೌಡ ಬಿರಾದಾರ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next