Advertisement

ಪೊಲೀಸ್‌ ಇಲಾಖೆಯಿಂದ ಮ್ಯಾರಥಾನ್‌

07:58 PM Nov 01, 2019 | |

ಯಾದಗಿರಿ: ಜಿಲ್ಲಾ ಪೊಲೀಸ್‌ ಇಲಾಖೆಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಯಾದಗಿರಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ರನ್‌ ಫಾರ್‌ ಯುನಿಟಿ ಮ್ಯಾರಥಾನ್‌ ಓಟಕ್ಕೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಚಾಲನೆ ನೀಡಿದರು.

Advertisement

ದೇಶದ ಪ್ರಥಮ ಗೃಹ ಖಾತೆ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಲಾಗುತ್ತಿದ್ದು, ಪ್ರಯುಕ್ತ ಮ್ಯಾರಥಾನ್‌ ಓಟ ಹಮ್ಮಿಕೊಳ್ಳಲಾಗಿತ್ತು.

ನಗರದ ಲುಂಬಿನಿವನದಿಂದ ಪ್ರಾರಂಭವಾದ ಮ್ಯಾರಥಾನ್‌ ಓಟ ಶಾಸ್ತ್ರೀ ವೃತ್ತ, ಸುಭಾಷ ವೃತ್ತ, ಪದವಿ ಮಹಾವಿದ್ಯಾಲಯ ಕ್ರಾಸ್‌, ಕನಕ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ಲುಂಬಿನಿವನ ತಲುಪಿ ಮುಕ್ತಾಯಗೊಂಡಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಷ್‌ ಭಗವಾನ್‌ ಸೋನವಣೆ, ಡಿವೈಎಸ್‌ಪಿ ಯು. ಶರಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಸಿಪಿಐ ಶರಣಗೌಡ ನ್ಯಾಮಣ್ಣೋರ, ನಗರ ಠಾಣೆ ಪಿಎಸ್‌ಐ ಬಾಪುಗೌಡ ಪಾಟೀಲ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ, ಉಪನ್ಯಾಸಕ ಬಿಸಲಪ್ಪ ಕಟ್ಟಿಮನಿ, ಐಎಂಎ ಕಾರ್ಯದರ್ಶಿ ಡಾ| ಪ್ರಸನ್ನ ಪಾಟೀಲ, ಡಾ| ಜೆ.ಡಿ. ಹುನಗುಂಟಿ, ಡಾ| ಪ್ರದೀಪರೆಡ್ಡಿ ಸೇರಿದಂತೆ ಸಾರ್ವಜನಿಕರು, ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next