Advertisement

Yadagiri; ಸೈದಾಪುರದಲ್ಲಿ ಅಗ್ನಿ ಅವಘಡ;15 ಅಂಗಡಿಗಳಿಗೆ ವ್ಯಾಪಿಸಿದ ಬೆಂಕಿ

07:24 AM Aug 18, 2024 | Team Udayavani |

ಸೈದಾಪುರ: ಅಗ್ನಿ ಅವಘಡ ಸಂಭವಿಸಿ 15 ಅಂಗಡಿಗಳು ಸುಟ್ಟು ಹೋದ ಘಟನೆ ಸೈದಾಪುರದಲ್ಲಿ ನಡೆದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

Advertisement

ಬೇಕರಿ, ಎಲೆಕ್ಟ್ರಾನಿಕ್, ಹೋಟೇಲ್, ಗ್ಯಾರೇಜ್ ಸೇರಿದಂತೆ ಒಟ್ಟು 15 ಅಂಗಡಿಗಳಿಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸಾರ್ವಜನಿಕರ ಆಕ್ರೋಶ: ಬೆಂಕಿ ತಗುಲಿದ ಬಗ್ಗೆ ಅಗ್ನಿ ಶಾಮಕ ಠಾಣೆ ಕರೆ ಮಾಡಿದರೆ, ಅವರು ಒಂದು ಗಂಟೆ ನಂತರ ಯಾದಗಿರಿಯಿಂದ ಆಗಮಿಸಿದರು, ಬೇಗ ಆಗಮಿಸಿದ್ದರೆ ಬೆಂಕಿ ನಂದಿಸಿ ಕೆಲವೊಂದು ವಸ್ತುಗಳನ್ನು ಉಳಿಸಬಹುದಾಗಿತ್ತು. ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೈದಾಪುರ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರೂ ಇನ್ನೂ ಏಚ್ಚೆತ್ತುಕೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next