Advertisement

ಯಾದಗಿರಿ: ತ್ರಿಶತಕದ ಗಡಿ ತಲುಪಿದ ಕೋವಿಡ್ ವೈರಸ್‌

11:57 AM Jun 04, 2020 | Naveen |

ಯಾದಗಿರಿ: ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ರೌದ್ರ ನರ್ತನ ತೋರುತ್ತಿದ್ದು, ಬುಧವಾರ ಮತ್ತೆ 9 ಜನರಲ್ಲಿ ಒಕ್ಕರಿಸಿದೆ. ಇದೀಗ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 299ಗೆ ಏರಿಕೆಯಾಗಿದ್ದು, ಈ ಹಿಂದೆ ಎರಡನೇ ಸ್ಥಾನಕ್ಕೇರಿದ್ದ ಜಿಲ್ಲೆ ಐದನೇ ಸ್ಥಾನಕ್ಕಿಳಿದು ತ್ರಿಶತಕದ ಹತ್ತಿರದಲ್ಲಿದೆ.

Advertisement

2 ವರ್ಷದ ಬಾಲಕ ಪಿ-3909 ಸೇರಿದಂತೆ 32 ವರ್ಷದ ಪುರುಷ ಪಿ-3901, 45 ವರ್ಷದ ಪುರುಷ ಪಿ-3902, 40 ವರ್ಷದ ಮಹಿಳೆ ಪಿ-3903, 28 ವರ್ಷದ ಮಹಿಳೆ ಪಿ-3904, 39 ವರ್ಷದ ಪುರುಷ ಪಿ-3905, 23 ವರ್ಷದ ಪುರು ಪಿ-3906, 46 ವರ್ಷದ ಪುರುಷ ಪಿ-3907 ಹಾಗೂ 36 ವರ್ಷದ ಮಹಿಳೆ ಪಿ-3908ರಲ್ಲಿ ಸೋಂಕು ಕಾಣಿಸಿದೆ. ಎಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂತಿರುಗಿದವರೇ ಆಗಿದ್ದಾರೆ.

ಬುಧವಾರದ 1040 ಜನರ ವರದಿ ನೆಗೆಟಿವ್‌ ಬಂದಿದ್ದು, ಈವರೆಗೆ 9114 ಮಾದರಿಗಳ ವರದಿ ನೆಗೆಟಿವ್‌ ಬಂದಿವೆ. 68 ಜನರ ಹೊಸ ಮಾದರಿ ಸಂಗ್ರಹಿಸಲಾಗಿದ್ದು, ಇನ್ನು 8621 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಕೋವಿಡ್‌19 ಖಚಿತಪಟ್ಟ ಸೋಂಕಿತರಲ್ಲಿ 28 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 774 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2107 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 5 ಕಂಟೇನ್ಮೆಂಟ್‌ ಝೋನ್‌ ರಚಿಸಲಾಗಿದೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 95 ಜನರು, ಶಹಾಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 61 ಜನ, ಸುರಪುರ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 14 ಹಾಗೂ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 90 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 67 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಒಟ್ಟು 3405 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.

ಸೋಂಕಿತರೆಲ್ಲರೂ ಜಿಲ್ಲೆಯ ಶಹಾಪುರ ತಾಲೂಕಿನವರಾಗಿದ್ದಾರೆ. ಕ್ರಮವಾಗಿ ನಾಲ್ವರು ದಾರಿಗುಡ್ಡ ಉಕ್ಕಿನಾಳ ತಾಂಡಾದವರಾಗಿದ್ದು, 2
ವರ್ಷದ ಬಾಲಕ ಸೇರಿದಂತೆ ಐವರು ಹಾಲಗೇರಾ ಗ್ರಾಮದವರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next