Advertisement

ಜೋಳದ ಬೆಳೆಗೂ ಆವರಿಸಿದ ಕೀಟಬಾಧೆ

05:43 PM Nov 30, 2019 | Naveen |

ಅನೀಲ ಬಸೂದೆ
ಯಾದಗಿರಿ:
ಜೋಳದ ಬೆಳೆಗೂ ಕೀಟಬಾಧೆ ಆರಂಭವಾಗಿದ್ದು, ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಸದ್ಯ ಜೋಳ ಬಿತ್ತನೆ ಮಾಡಿ ಕೇವಲ ಒಂದು ತಿಂಗಳಾಗಿದ್ದು, ಇನ್ನೂ ಕಾಂಡ ಬೆಳೆಯುವ ಹಂತದಲ್ಲಿಯೇ ಹುಳು ಕಾಣಿಸಿಕೊಂಡಿದೆ. ಜೋಳದ ಎಲೆಗಳನ್ನು ಬೆಳೆಯಲು ಬಿಡದೇ ಸಂಪೂರ್ಣ ತಿಂದು ಹಾಕುತ್ತಿದೆ.

Advertisement

ಈ ಭಾಗದ ಹಿಂಗಾರಿನ ಪ್ರಮುಖ ಬೆಳೆಯಾಗಿರುವ ಜೋಳದ ಬೆಳೆ ಈ ಬಾರಿ ಕೈಗೆ ಬರುತ್ತೋ ಇಲ್ಲ. ಮಣ್ಣು ಪಾಲಗುತ್ತದೋ ಎನ್ನುವ ಚಿಂತೆಯಲ್ಲಿ ರೈತ ಮುಳುಗುವಂತೆ ಮಾಡಿದೆ. ಕೀಟವು ಮೊದಲು ಮೆಕ್ಕೆಜೋಳದಲ್ಲಿ ಮಾತ್ರ ಕಂಡು ಬರುತ್ತಿತ್ತು. ಬಳಿಕ ಜೋಳಕ್ಕೂ ಲಗ್ಗೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಮೆಕ್ಕೆಜೋಳ, ಜೋಳ, ಭತ್ತ, ಗೋಧಿ , ಕಿರುಧಾನ್ಯದ ಬೆಳೆಗಳು, ಮೇವಿನ ಬೆಳೆ ಹಾಗೂ ಮುಂತಾದವುಗಳ ಬೆಳೆಗಳಿಗೆ ಫಾಲ್‌ ಸೈನಿಕ ಬಾಧಿ ಸುತ್ತದೆ ಎನ್ನುವ ಅಂಶ ತೋಟಗಾರಿಕೆ ವಿಜ್ಞಾನಿಗಳ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರು ಹಲವೆಡೆ ಭೇಟಿ ನೀಡಿ ಅಧ್ಯಯನ ನಡೆಸಿರುವ ವೇಳೆ ಬೆಳಕಿಗೆ ಬಂದಿದೆ.

ಜೋಳದಲ್ಲಿ ಫಾಲ್‌ ಸೈನಿಕ ಹುಳು ಹಾವಳಿ ಪತ್ತೆಯಾಗಿದ್ದು, ಅಧ್ಯಯನದ ಪ್ರಕಾರ ಪ್ರತಿ ಸುಳಿಗೆ 0.2-0.8 ಕೀಟವಿದ್ದಲ್ಲಿ ಅದು ಸುಮಾರು ಶೇ. 5-20ರಷ್ಟು ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಸದ್ಯ ಸಂಪೂರ್ಣ ಹುಳು ಆವರಿಸಿರುವುದು ಕಂಡು ಬಂದಿದ್ದು, ಇದರಿಂದ ರೈತರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಥಮ ಹಂತದ ಮರಿ ಹುಳುಗಳು ಸಾಮೂಹಿಕವಾಗಿದ್ದು, ಎಲೆ ಹರಿತ್ತು ಕೆರೆದು ತಿನ್ನುತ್ತಿವೆ. ಇದರಿಂದ ಎಲೆಗಳ ಮೇಲೆ ಪಾರದರ್ಶಕವಾದ ಪದರನ್ನು ಕಾಣಬಹುದು. ನಂತರ ಬೆಳೆದಂತೆಲ್ಲ ಹುಳುಗಳು ಪಕ್ಕದ ಗಿಡಗಳಿಗೆ ಹರಡಿ ಜೋಳದ ಸುಳಿಯಲ್ಲಿ ಉಳಿದುಕೊಂಡು ಎಲೆಗಳನ್ನು ತಿಂದು ಹಾಕುತ್ತಿವೆ. ಕೀಟದಿಂದ ಹಾನಿಗೊಳಗಾದ ಎಲೆಗಳು ಜಾಳುಜಾಳಾಗಿದ್ದು, ಎಲೆಗಳಲ್ಲಿ ಸಾಲಾಗಿ ಉದ್ದನೆ ರಂಧ್ರಗಳು ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next