Advertisement

Bangalore: ಪೊಲೀಸ್‌ ಅಚಾತುರ್ಯಕ್ಕೆ ರೈಟರ್‌ ಕಾಲಿಗೆ ಗುಂಡು

09:13 AM Mar 23, 2024 | Team Udayavani |

ಬೆಂಗಳೂರು: ಠೇವಣಿ ಇಡಲು ಬಂದಿದ್ದ ಕಂಟ್ರಿಮೇಡ್‌ ಪಿಸ್ತೂಲ್‌ ಪರಿಶೀಲಿಸುವ ವೇಳೆ ಠಾಣಾ ಸಿಬ್ಬಂದಿಯಿಂದ ಮಿಸ್‌ ಫೈಯರ್‌ ಆಗಿ ರೈಟರ್‌ ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ.

Advertisement

ಬೇಗೂರು ಠಾಣೆಯ ಕಾನ್‌ ಸ್ಟೇಬಲ್‌ ವೆಂಕಣ್ಣ ಅವರಿಂದ ಮಿಸ್‌ ಫೈಯರಿಂಗ್‌ ಆಗಿ ಠಾಣಾ ರೈಟರ್‌ ಅಂಬುದಾಸ್‌ ಎಂಬುವವರಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಪೊಲೀಸ್‌ ಕಮೀ ಷನರ್‌ ಸೂಚನೆಯಂತೆ ಮುಕುಂದರೆಡ್ಡಿ ಎಂಬುವರು ತಮ್ಮ ಬಳಿಯಿದ್ದ ಕಂಟ್ರಿಮೇಡ್‌ ಪಿಸ್ತೂಲ್‌ ಅನ್ನು ಠಾಣೆಯಲ್ಲಿ ಠೇವಣಿ ಇಡಲು ಗುರುವಾರ ಪಿಸ್ತೂಲ್‌ ಸಮೇತ ಬಂದಿದ್ದರು.

ಕಾನ್‌ ಸ್ಟೇಬಲ್‌ ವೆಂಕಣ್ಣ ಪಿಸ್ತೂಲ್‌ ಅನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಟ್ರಿಗರ್‌ ಒತ್ತಿದ್ದ ತಕ್ಷಣ ಪಿಸ್ತೂಲ್‌ನಿಂದ ಗುಂಡು ಎದುರುಗಡೆ ಕುಳಿತಿದ್ದ ಠಾಣಾ ರೈಟರ್‌ ಅಂಬುದಾಸ್‌ ಅವರ ಎಡಕಾಲಿಗೆ ಮಿಸ್‌ ಫೈಯರ್‌ ಆಗಿದೆ. ಗಂಭೀರವಾಗಿ ಗಾಯಗೊಂಡ ಅಂಬುದಾಸ್‌ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪಿಸ್ತೂಲ್‌ನಲ್ಲಿದ್ದ ಬುಲೆಟ್‌ ಲಾಕ್‌ ಆಗಿರುವ ಸಾಧ್ಯತೆ ಇದೆ. ಪರಿಶೀಲನೆ ಮಾಡುವಾಗ ಟ್ರಿಗರ್‌ ಒತ್ತಿದಾಗ ತಪ್ಪಿ ಗುಂಡು ಹಾರಿರುವ ಶಂಕೆ ವ್ಯಕ್ತವಾಗಿದೆ.

ಬೇಗೂರು ಠಾಣೆಗೆ ದೌಡಾಯಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ಸಿಬ್ಬಂದಿ ಗುಂಡು ಹಾಗೂ ಪಿಸ್ತೂಲ್‌ ಅನ್ನು ಪರಿಶೀಲನೆ ನಡೆಸಿದೆ. ಗುಂಡು ಹಾರಿಸಿದ ಕಾನ್‌ ಸ್ಟೇಬಲ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಗ್ಗೆ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next