Advertisement

ED ವಿರುದ್ಧ ರಿಟ್‌ ಅರ್ಜಿ: ತಮಿಳು ನಾಡು ಸರಕಾರಕ್ಕೆ ಸುಪ್ರೀಂ ಚಾಟಿ

12:47 AM Feb 25, 2024 | Team Udayavani |

ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಾಡಿನ ಕೆಲವು ಸರಕಾರಿ ಅಧಿಕಾರಿಗಳ ವಿರುದ್ದ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ತನಿಖೆಯನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಸರಕಾರವನ್ನು ಸುಪ್ರೀಂ ತರಾಟೆ ತೆಗೆದುಕೊಂಡಿದ್ದು, ಯಾವ ಕಾನೂನಿನ ಅನ್ವಯ ಇ.ಡಿ. ತನಿಖೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದೆ.

Advertisement

ವೆಲ್ಲೂರು, ತಿರುಚಿರಾಪಲ್ಲಿ, ಕರೂರ್‌, ತಂಜಾವೂರು, ಅರಿಯಲೂರಿನ ಜಿಲ್ಲಾಧಿಕಾರಿ ಗಳಿಗೆ ಇ.ಡಿ. ಅಧಿಕಾರಿ ಗಳು ಇತ್ತೀಚೆಗಷ್ಟೇ ಮರಳು ಅಕ್ರಮ ಗಣಗಾರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಸಮನ್ಸ್‌ ನೀಡಿದ್ದರು. ಇದನ್ನು ಖಂಡಿಸಿದ ರಾಜ್ಯ ಸರಕಾರವು ತನ್ನ ಅಧಿಕಾರಿಗಳೊಂದಿಗೆ ಸೇರಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಮನ್ಸ್‌ಗೆ ತಡೆ ನೀಡಲು ಅರ್ಜಿ ಸಲ್ಲಿಸಿತ್ತು. ಅದರಂತೆ ಹೈಕೋರ್ಟ್‌ ಸಮನ್ಸ್‌ಗೆ ತಡೆ ಕೂಡ ನೀಡಿತ್ತು. ಇದೀಗ ಮದ್ರಾಸ್‌ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಇ.ಡಿ. ಅಧಿಕಾರಿಗಳು ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾ| ಬೇಲಾ ಎಂ ತ್ರಿವೇದಿ, ನ್ಯಾ| ಪಂಕಜ್‌ ಮಿಥಲ್‌ ಅವರ ನ್ಯಾಯಪೀಠ ಈ ಅರ್ಜಿಯನ್ನು ಆಲಿಸಿದೆ. ಈ ವೇಳೆ ರಾಜ್ಯವೊಂದು ಯಾವ ಕಾನೂನಿನ ಅನ್ವಯ ಜಾರಿ ನಿರ್ದೇಶನಾಲಯದ ವಿರುದ್ಧ ರಿಟ್‌ ಅರ್ಜಿಯನ್ನು ಸಲ್ಲಿಸಬಹುದು ? ಹೇಗೆ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದೆ. ಜತೆಗೆ ತನಿಖೆಗೆ ಸಹಕರಿಸುವಂತೆ ರಾಜ್ಯದ ಅಧಿಕಾರಿಗಳಿಗೂ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next