Advertisement

ಕೇಜ್ರಿವಾಲ್ ಯಾವುದೇ ನೆರವು ನೀಡಲಿಲ್ಲ: ಕಂಚು ಗೆದ್ದ ದಿವ್ಯಾ ಕಕ್ರನ್

08:07 PM Aug 11, 2022 | Team Udayavani |

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನೆರವು ನೀಡುವುದಾಗಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿಲ್ಲ ಎಂದು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚು ಗೆದ್ದ ಕುಸ್ತಿಪಟು ದಿವ್ಯಾ ಕಕ್ರನ್ ಆರೋಪ ಮಾಡಿದ್ದಾರೆ.

Advertisement

ಮಾಧ್ಯಮಗಳ ಎದುರು ಮಾತನಾಡಿದ ದಿವ್ಯಾ, ನಾನು ಏಷ್ಯಾದಲ್ಲಿ ಪದಕ ಗೆದ್ದ ನಂತರ 2017 ರಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ. ಅವರಿಗೆ ಲಿಖಿತವಾಗಿ ಪತ್ರವನ್ನು ನೀಡಿದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ನಾನು ಹಾಗೆ ಮಾಡಿದೆ, ಆದರೆ ಅವರು ಪೋಷಣೆ, ಪ್ರಯಾಣ, ಇತರ ಯಾವುದೇ ವೆಚ್ಚದಲ್ಲಿ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.

ನಾನು ಅತ್ಯಂತ ಬಡತನದಿಂದ ಬಂದಿದ್ದೇನೆ, ಪ್ರಯಾಣಿಸಲು ಹಣವಿಲ್ಲ,  ಸ್ಪರ್ಧೆಗಳಿಗೆ ಪ್ರಯಾಣಿಸಲು ಸಾಮಾನ್ಯ ಬೋಗಿಯಲ್ಲಿ ರೈಲಿನ ಶೌಚಾಲಯದ ಪಕ್ಕದಲ್ಲಿ ಕುಳಿತುಕೊಂಡು ಪ್ರಯಾಣಿಸಿದ್ದೇನೆ. ದೆಹಲಿ ಸರಕಾರ ನಮಗೆ ಸಹಾಯ ಮಾಡಿಲ್ಲ. ನಾನು 2018ರಲ್ಲಿ ಯುಪಿಯಿಂದ ಆಡಲು ಆರಂಭಿಸಿದೆ ಎಂದು ಹೇಳಿದ್ದಾರೆ.

2019 ರಲ್ಲಿ ಉತ್ತರ ಪ್ರದೇಶ ಸರಕಾರವು ನನಗೆ ರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿಯನ್ನು ನೀಡಿದೆ. 2020 ರಲ್ಲಿ ಅವರು ನನಗೆ ಜೀವಿತಾವಧಿಯ ಪಿಂಚಣಿ ನೀಡಿದರು. ನಿನ್ನೆ, ಅವರು 50 ಲಕ್ಷ ರೂ ಮತ್ತು ಗೆಜೆಟೆಡ್ ಅಧಿಕಾರಿ ಶ್ರೇಣಿಯ ಹುದ್ದೆಯನ್ನು ಘೋಷಿಸಿದರು. ಯುಪಿ ಸರ್ಕಾರ ನನಗೆ ಸಹಾಯ ಮಾಡಿದೆ, ಹರಿಯಾಣ ಸರ್ಕಾರ ಕೂಡ ಮಾಡಿದೆ. ಆದರೆ ದೆಹಲಿ ಸರಕಾರ ಸಹಾಯಕ್ಕೆ ಬರಲೇ ಇಲ್ಲ ಎಂದು ಹೇಳಿದರು.

ಇಷ್ಟು ದಿನ ನಾನು ಕುಸ್ತಿ ಹೋರಾಟ ನಡೆಸುತ್ತಿದ್ದೆ, ನಾನು ಹುಡುಗಿಯರೊಂದಿಗೆ ಹೋರಾಡಿದರೆ ಯಾರೂ ನನಗೆ ಹಣ ನೀಡುವುದಿಲ್ಲ, ಹಾಗಾಗಿ ನನ್ನ ಪೋಷಣೆಯನ್ನು ಉಳಿಸಿಕೊಳ್ಳಲು ನಾನು ಹುಡುಗರೊಂದಿಗೆ ಹೋರಾಡಿದೆ. 2017 ರ ಹೊತ್ತಿಗೆ, ನಾನು ದೆಹಲಿಗೆ 58 ಪದಕಗಳನ್ನು ನೀಡಿದ್ದೇನೆ ಎಂದು ಹೇಳಿದರು.

Advertisement

ಬಿಜೆಪಿ ಆಕ್ರೋಶ

ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ದಿವ್ಯಾ ಕಕ್ರಾನ್ ಅವರನ್ನು ಗುರಿಯಾಗಿಸಿಕೊಂಡು ಮಹಿಳೆಯರು ಮತ್ತು ಕ್ರೀಡಾಪಟುಗಳನ್ನುಅವಮಾನಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಎಎಪಿ ಸಾಮಾಜಿಕ ಮಾಧ್ಯಮ ತಂಡವು ಕಕ್ರಾನ್ ಅವರನ್ನು “ಅವಮಾನಕರವಾಗಿ” ಟ್ರೋಲ್ ಮಾಡಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂನಾವಾಲಾ, ದೆಹಲಿಯನ್ನು ಪ್ರತಿನಿಧಿಸುವ ಬಗ್ಗೆ ಕಕ್ರಾನ್ ಪ್ರಮಾಣಪತ್ರವನ್ನು ನೀಡಿದರು ಮತ್ತು ಸೈನಿಕರು ಅಥವಾ ಕ್ರೀಡಾಪಟುಗಳು ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯುವವರನ್ನು ಅವಮಾನಿಸುವ ಇತಿಹಾಸವನ್ನು ಎಎಪಿ ಹೊಂದಿದೆ ಎಂದು ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next