Advertisement

ಖರ್ಗೆದ್ವಯರಿಗಾಗಿ ದತ್ತ ದೇಗುಲದಲ್ಲಿ ಪೂಜೆ

09:39 PM Jan 19, 2022 | Team Udayavani |

ಅಫಜಲಪುರ: ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಮಾಜ ಸೇವಕ ಜೆ.ಎಂ. ಕೊರಬು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisement

ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ದೇಶ ಕಂಡ ಅಪ್ರತಿಮ ರಾಜಕಾರಣಿ, ಜನಸೇವೆಯನ್ನೇ ಉಸಿರಾಗಿಸಿಕೊಂಡ ಧೀಮಂತ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದರಿಂದ ಅವರ ಅಭಿಮಾನಿಗಳಿಗೆಲ್ಲ ಆತಂಕ ಮನೆ ಮಾಡಿದೆ.

ಅಲ್ಲದೇ ಅವರ ಮಗ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೂ ಪಾಸಿಟಿವ್‌ ಆಗಿದೆ. ಹೀಗಾಗಿ ನಾವು ಖರ್ಗೆದ್ವಯರ ಆರೋಗ್ಯಭಾಗ್ಯಕ್ಕಾಗಿ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ಸನ್ನಿ ಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಮೊರೆ ಹೋಗಿದ್ದೇವೆ ಎಂದರು. ಮುಖಂಡರಾದ ಉದಯಭಟ್‌ ಪೂಜಾರಿ, ರುದ್ರಯ್ಯ ಹಿರೆಮಠ, ಬೀರಣ್ಣ ಕನಕಟೇಲರ್‌, ರವಿ ಗೌರ, ಪಕ್ರೂದ್ದೀನ್‌ ನರೋಣ, ನಾಗೇಶ ಹೊಸಮನಿ, ದಿಗಂಬರ ಕಾಡಹುಲಿ, ಶಿವು ಹಿರೇಮಠ, ಕರೆಪ್ಪ ಪೂಜಾರಿ, ಗುರಪ್ಪ ಹಾವಳಗಿ ಮತ್ತಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next