Advertisement

ಕೊರಟಗೆರೆ: ಕನ್ನಡ ಭಾಷಾ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ

09:16 AM Aug 19, 2022 | Team Udayavani |

ಕೊರಟಗೆರೆ: ಎಲ್ಲಾ ಶಿಕ್ಷಕರಿಗೂ ಕನ್ನಡ ಭಾಷಾ ಪ್ರೌಢಿಮೆ ಬೆಳೆಸುವುದರ ಜೊತೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವುದರ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಕೆ.ಜಿ.ರಂಗಯ್ಯ ಹೇಳಿದರು.

Advertisement

ಅವರು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯ ಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್. ಸುಧಾಕರ್, ಮುಖ್ಯ ಶಿಕ್ಷಕ ಶಿವಸ್ವಾಮಿ, ವಿಷಯ ಪರೀವೀಕ್ಷಕರಾದ ಚಿತ್ತಯ್ಯ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೋಟೆ ಕಲ್ಲಯ್ಯ, ಪದಾಧಿಕಾರಿಗಳಾದ ಧರ್ಮೇಂದ್ರ ಪ್ರಸಾದ್, ಚಿಕ್ಕಪ್ಪಯ್ಯ, ‌‌ಹನುಮಂತರಾಯಪ್ಪ, ನರ‌‌ಸಿಂಹರಾಜು, ಡಯಟ್ ಉಪನ್ಯಾಸಕರಾದ ಮಂಜುನಾಥ್, ದಿನೇಶ್, ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಿಪುತ್ರ, ಸಂಪನ್ಮೂಲ ವ್ಯಕ್ತಿಗಳಾಗಿ ದುಶ್ಯಂತ್ ಕುಮಾರ್, ಮಂಜೇಗೌಡ. ಮಂಜುಳ ಹಾಗೂ ತಾಲೂಕಿನ ಎಲ್ಲಾ ಕನ್ನಡ ಭಾಷಾ ಶಿಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next