Advertisement

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

12:54 AM Sep 29, 2023 | Team Udayavani |

ಹೊಸದಿಲ್ಲಿ: ವರ್ಷಾಂತ್ಯದ ವೇಳೆಗೆ ಹೆದ್ದಾರಿಗಳನ್ನು ಗುಂಡಿ ಮುಕ್ತ ಮಾಡುವ ನಿಟ್ಟಿನಲ್ಲಿ ಸರಕಾರವು ನೀತಿಯೊಂದನ್ನು ರೂಪಿಸುತ್ತಿದೆ. ಉತ್ತಮ ನಿರ್ವಹಣೆಗಾಗಿ ಬಿಲ್ಟ್-ಆಪರೇಟ್‌-ಟ್ರಾನ್ಸ್‌ಫ‌ರ್‌(ಬಿಒಟಿ) ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

ಸಾಮಾನ್ಯವಾಗಿ ರಸ್ತೆಗಳನ್ನು ಬಿಒಟಿ ಮತ್ತು ಹೈಬ್ರಿಡ್‌ ಅನ್ಯೂ ಯಿಟಿ ಮಾಡೆಲ್‌ (ಎಚ್‌ಎಎಂ) ಹಾಗೂ ಎಂಜಿನಿಯ ರಿಂಗ್‌-ಪ್ರೊಕ್ಯೂರ್‌ವೆುಂಟ್‌- ಕನ್ಸ್‌ಸ್ಟ್ರಕÏನ್‌(ಇಪಿಸಿ) ಮೋಡ್‌ಗಳಲ್ಲಿ ನಿರ್ಮಿಸಲಾಗುತ್ತದೆ ಎಂದಿದ್ದಾರೆ.

ಬಿಒಟಿ ಮೋಡ್‌ನ‌ಲ್ಲಿ 15-20 ವರ್ಷ ನಿರ್ವಹಣೆಯ ವೆಚ್ಚವನ್ನು ಗುತ್ತಿಗೆದಾರರೇ ಭರಿಸಬೇಕಾಗುತ್ತದೆ. ಈ ಕಾರಣಕ್ಕೆ ಗುತ್ತಿಗೆದಾರ ಸಂಸ್ಥೆ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸುತ್ತವೆ. ಇದಕ್ಕಾಗಿ ಬಿಒಟಿ ಮೋಡ್‌ಗೆ ಹೆಚ್ಚಿನ ಆದ್ಯತೆ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಗಡ್ಕರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next