Advertisement

ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡ ‘ಬೇಕರಿ ಸಿಸ್ಟರ್ಸ್’..!

05:20 PM Jul 25, 2021 | Team Udayavani |

ಅಹಮದಬಾದ್ :  ಗುಜರಾತ್ ನ ದಂಗ್ ಜಿಲ್ಲೆಯ ನಡ್ಗಾಖಡಿಯ ಬುಡಕಟ್ಟು ಜನಾಂಗಕ್ಕೆ ಸೇರಿದ  ಹತ್ತು ಮಂದಿ ಮಹಿಳೆಯರಷ್ಟೇ ಇದ್ದ ಸ್ವ-ಸಹಾಯ ಸಂಘವೊಂದು ಕಳೆದ ನಾಲ್ಕು ವರ್ಷಗಳಿಂದ ದುಡಿಮೆಯಲ್ಲಿ ಉಳಿದ ಭಾಗವನ್ನು ಸೇರಿಸಿಕೊಂಡು ಬೇಕರಿ ಉದ್ಯಮ ಆರಂಭಿಸಿದ್ದು ಈಗ ಜನ ಮೆಚ್ಚುಗೆಗೆ ಕಾರಣವಾಗುತ್ತಿದೆ.

Advertisement

‘ಅಪನಾ ಬೇಕರಿ’ ಎಂಬ ಹೆಸರಿನಲ್ಲಿ ಬೇಕರಿ ಆರಂಭವಾಗಿದ್ದು, ರಾಗಿಯಿಂದ ತಯಾರಿಸುವ ಬೇಕರಿ ತಿನಿಸುಗಳು ಇಲ್ಲಿ ಲಭ್ಯವಿದೆ. ನಾಲ್ಕು ವರ್ಷಗಳ ನಿರಂತರ ಪರಿಶ್ರಮದಿಂದಾಗಿ ಈ ಬೇಕರಿ ಆರಂಭವಾಗಿದ್ದು, ಈಗ ಆ ಹತ್ತು ಮಂದಿ ಮಹಿಳೆಯರನ್ನು ಅಲ್ಲಿ ‘ಬೇಕರಿ ಸಿಸ್ಟರ್ಸ್’ ಎಂದೇ ಅಲ್ಲಿ ಕರೆಯುತ್ತಾರೆ ಎನ್ನುವುದು ವಿಶೇಷ.

ರಾಗಿ ಬಿಸ್ಕೇಟ್ಸ್ ಗೆ ಫೇಮಸ್ ಅಪನಾ ಬೇಕರಿ

ಬೇಕರಿಯನ್ನು ಆರಂಭಿಸಿದಾಗ ಬೇರೆ ಬೇರೆ ಹಿಟ್ಟುಗಳಿಂದ ಬಿಸ್ಕೇಟ್ ಗಳನ್ನು ಮಾಡುತ್ತಿದ್ದೇವು, ನಂತರ ನಮ್ಮ ಸಂಘದ ಸದಸ್ಯರೆಲ್ಲರ ಅಭಿಪ್ರಾಯ ತೆಗೆದುಕೊಂಡು ರಾಗಿ ಬಿಸ್ಕೇಟ್ಸ್ ಗಳನ್ನು ಮಾಡುವುದಕ್ಕೆ ಆರಂಭಿಸಿದೆವು. ನಮ್ಮಲ್ಲಿ ರಾಗಿ ಬಿಸ್ಕೇಟ್ಸ್,  ರಾಗಿ ಧನ್ ನಲ್ಲಿ ಬೆಳೆಯುವ ಪ್ರಮುಖ ಬೆಳೆ, ಇದರಲ್ಲಿ ಪ್ರೋಟೀನ್ ಮತ್ತು ಇತರ ಅನೇಕ ಜೀವಸತ್ವಗಳಿವೆ. ನಾವು ಗಳಿಸಿದ ಯಾವುದೇ ಮೊತ್ತವನ್ನು ಬೇಕರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ದೈನಂದಿನ ವೇತನವನ್ನು ಪಾವತಿಸಿದ ನಂತರ ಬೇಕರಿಗಾಗಿ ಇತರೆ ವಸ್ತುಗಳನ್ನು ಖರೀದಿಸಲು ಉಳಿಸುತ್ತೇವೆ ಎನ್ನುತ್ತಾರೆ ಅಪನಾ ಬೇಕರಿಯ ಹತ್ತು ಮಂದಿ ಮಹಿಳಯರ ಗುಂಪಿನಲ್ಲಿ ಓರ್ವರಾದ ಕಲ್ಪನಾ ಗಾಯಕ್ ವಾಡ.

ಬೇಕರಿಯ ಉತ್ಪನ್ನಗಳನ್ನು ಸೂರತ್, ಸಪುತರ, ಅಹಮದಾಬಾದ್ ಮತ್ತು ಮುಂಬೈಗೆ ಕಳುಹಿಸಲಾಗುತ್ತದೆ. ನಂಖಟೈ, ಚಕ್ರಿ, ಟೋಸ್ಟ್ ಮತ್ತು ಪಾಪಡ್ ನನ್ನು ಉತ್ಪಾದಿಸಲಾಗುತ್ತದೆ. ಬೇಕರಿಯಲ್ಲಿ ಕೆಲಸ ಮಾಡುವ ಮಹಿಳೆಯರು ದಿನಕ್ಕೆ 200 ರೂ ಗಳಿಸುವ ಕೂಲಿ ಕಾರ್ಮಿಕರಾಗಿದ್ದಾರೆ.

Advertisement

ಗ್ರಾಮ ಸಭೆಯೊಂದರಲ್ಲಿ ಅಗಾ ಖಾನ್ ಎನ್ ಜಿ ಒ ವೊಂದು ಗ್ರಾಮ ಮಟ್ಟದ ಸ್ವ ಸಹಾಯ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದಾಗ ರಾಜ್ಯ ಸರ್ಕಾರದ ಸಖಿ ಮಂಡಲ ಯೋಜನೆ ಅಡಿಯಲ್ಲಿ ಆರಂಭವಾದ ಈ ರಿದ್ವಿ ಸಿದ್ವಿ ಸ್ವ-ಸಹಾಯ ಸಂಘದ ಮೂಲಕ  ಒಂದಾದ ಈ  ಮಹಿಳೆಯರು, ತಿಂಗಳಿಗೊಮ್ಮೆ ಸೇರುತ್ತಿದ್ದರು. ದುಡಿದ ಒಂದಿಷ್ಟು ಪಾಲನ್ನು ಸಂಗ್ರಹಿಸಿದ ಮೊತ್ತ ದೊಡ್ಡದಾದಾಗ 2017 ರಲ್ಲಿ ಅಪನಾ ಬೇಕರಿ ಆರಂಭವಾಯಿತು.

ಈಗ ದುಪ್ಪಟ್ಟು ದುಡಿಯುತ್ತಿದ್ದೇವೆ

ಕೃಷಿ ಕಾರ್ಮಿಕರಾಗಿದ್ದಾಗ ನಾವು ದಿನನಿತ್ಯ 100 ರೂ. ವೇತನವನ್ನು ಪಡೆಯುತ್ತಿದ್ದೆವು. ಈಗ ನಮಗೆ ದಿನಕ್ಕೆ 200 ರೂ. ಸಿಗುತ್ತದೆ.” “ಈ ಮೊದಲು ನಾವು ಹಣದ ತೊಂದರೆ ಅನುಭವಿಸುತ್ತಿದ್ದೆವು. ಮಾತ್ರವಲ್ಲದೇ, ನಮ್ಮ ಅಗತ್ಯತೆಗಳಿಗೆ ಬೇರೆಯವರನ್ನು ಅವಲಂಭಿಸಿರಬೇಕಾಗಿತ್ತು. ಆದರೇ, ನಾವು ಈಗ ಸ್ವಾವಲಂಭಿಗಳಾಗಿದ್ದೇವೆ ಎನ್ನುತ್ತಾರೆ ಅಪನಾ ಬೇಕರಿಯಲ್ಲಿ ದುಡಿಯುವ ಜಯಶ್ರೀ ಭೋಯ್.

ಒಟ್ಟಿನಲ್ಲಿ, ಸಮಾಜದ ಕೇಳವರ್ಗದಲ್ಲಿ ಕೃಷಿಯೊಂದಿಗೆ ಅಲ್ಪ ವೇತನಕ್ಕೆ ದುಡಿಯುತ್ತಿದ್ದ ಮಹಿಳೆಯರು ಇಂದು ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

Advertisement

Udayavani is now on Telegram. Click here to join our channel and stay updated with the latest news.

Next