Advertisement

“ಮಹಿಳಾ ಮೀಸಲಾತಿ: ಎಲ್ಲ ಪಕ್ಷಗಳ  ಒಮ್ಮತದ ನಿರ್ಧಾರ ಅಗತ್ಯ’

03:40 PM Mar 09, 2017 | |

ಉಡುಪಿ: ಮಹಿಳೆಯರಿಗೆ ಶೇ. 50 ಮೀಸಲಾತಿ ತರುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಒಮ್ಮತದ ನಿರ್ಧಾರ ಅತೀ ಅಗತ್ಯವೆಂದು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯರಾದ ರೇಶ್ಮಾ ಉದಯ ಕುಮಾರ ಶೆಟ್ಟಿ  ಹೇಳಿದರು.

Advertisement

ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಮತೆಯ ಸಾಕಾರ ಮೂರ್ತಿ ಮಹಿಳೆಯಾಗಿದ್ದಾಳೆ.  ಸಂಸ್ಕಾರ ನೀಡುವ ಜವಾಬ್ದಾರಿಯೊಂದಿಗೆ ಕುಟುಂಬವನ್ನು ನಿರ್ವಹಿಸುವ ವಿಶೇಷ ಶಕ್ತಿಯೂ ಆಕೆಯಲ್ಲಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಭಾವನೆಗಳನ್ನು ಗೌರವಿಸುವ ಪರಿಸ್ಥಿತಿ ಮತ್ತಷ್ಟು ತೀವ್ರವಾಗಬೇಕು ಹಾಗೂ ಮಹಿಳೆ ತನಗೆ ಸಿಕ್ಕ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ತಿರುಗದಂತೆ ಎಚ್ಚರಿಕೆ ವಹಿಸಬೇಕೆಂದೂ ಅವರು ಹೇಳಿದರು.

ಮಾಧ್ಯಮ ಪ್ರಕೋಷ್ಠದ ಸಂಚಾಲಕರಾದ ಪೂರ್ಣಿಮಾ ಸುರೇಶ್‌, ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ನಗರ ವಿಭಾಗದ ಅಧ್ಯಕ್ಷರಾದ ರಜನಿ ಹೆಬ್ಟಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್‌, ರಕ್ತ ನಿಧಿಯ ಅಧಿಕಾರಿ ಡಾ| ವೀಣಾ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನ ಗಣೇಶ್‌ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ವೀಣಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next