Advertisement

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಬಿರುಸಿನ ಸ್ಪರ್ಧೆ ನೀಡಬೇಕು : ಸಿಎಂ ಬೊಮ್ಮಾಯಿ

08:55 PM Oct 04, 2021 | Team Udayavani |

ಬೆಂಗಳೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬೆಂಗಳೂರಿನಲ್ಲಿ ಇಂದು  ಎಫ್ಐಸಿಸಿಐ, ಫೆಡರೇಶನ್ ಆಫ್ ಲೇಡೀಸ್ ಆರ್ಗನೈಜೇಶನ್ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿನ ಎಲ್ಲಾ ಮಹಿಳೆಯರು ದುಡಿಯುವಂತಾಗಬೇಕು. ದುಡಿಯುವ ಕೈಗಳು ಹೆಚ್ಚಾದರೆ ದೇಶದ ಆರ್ಥಕತೆ ಕೂಡ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮಹಿಳಾ ಉದ್ಯಮಿಗಳ ಪರವಾಗಿ ಇರುತ್ತದೆ. ಸರ್ಕಾರ ನೀಡುವ ಹಲವು ಸಬ್ಸಿಡಿ ಮತ್ತು ಸವಲತ್ತುಗಳನ್ನು ಪಡೆದು ಮಹಿಳೆಯರು ಸಾಧನೆ ಮಾಡಬೇಕು. ಸಾಧನೆಯನ್ನು ಯಶಸ್ಸಿನ್ನಾಗಿ ಪರಿವರ್ತಿಸಬೇಕು. ಎಲ್ಲಾ ಮಹಿಳೆಯರು ಯಶಸ್ವಿ ಆಗಬೇಕು ಎಂದು ಅವರು ಕರೆ ನೀಡಿದರು.

ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಹೆಚ್ಚಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು.  ಆಗ ದೇಶದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಮಹಿಳೆಯರು ಪುರುಷರಿಗಿಂತ ಸೂಕ್ಷ್ಮಜೀವಿಗಳು. ಆದರೆ ಅಷ್ಟೇ ಶಕ್ತಿಶಾಲಿ ಕೂಡ ಹೌದು.  ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವಂತಹ ಶಕ್ತಿ ಇರುವುದು ಮಹಿಳೆಯರಿಗೆ ಮಾತ್ರ. ಪುರುಷರಿಗೆ ಆ ಶಕ್ತಿ ಇಲ್ಲ. ಹೀಗಾಗಿ ಮಹಿಳಾ ಶಕ್ತಿ ಮತ್ತಷ್ಟು ಹೆಚ್ಚಬೇಕಾದರೆ ಆರ್ಥಿಕ ಸಬಲೀಕರಣ ಆಗಬೇಕು. ಹಣಕಾಸಿನ ವಿಚಾರದಲ್ಲಿ  ಪುರುಷರ ಮೇಲೆ ಅವಲಂಬನೆ ಕಡಿಮೆ ಆಗಬೇಕು. ಮಹಿಳೆಯರು ಸಶಕ್ತರಾಗಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಬೇಕು  ಎಂಬ ಆಶಯವನ್ನು ಸಿಎಂ ವ್ಯಕ್ತಪಡಿಸಿದರು.

Advertisement

ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಎಫ್ ಎಲ್ ಒ ಅಧ್ಯಕ್ಷೆ ರೇವತಿ ರಾಜು ಮತ್ತು ಹಲವಾರು ಜನ ಮಹಿಳಾ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಬಿರುಸಿನ ಸ್ಪರ್ಧೆ ನೀಡಬೇಕು.  ಆಗ ಪುರುಷರೂ ಕೂಡ ಮಹಿಳೆಯರಿಗಿಂತ ಹೆಚ್ಚು ಪರಿಶ್ರಮ ಪಡುತ್ತಾರೆ. ಕೆಲಸ ಮಾಡುತ್ತಾರೆ. ಇದರಿಂದ ದೇಶ ಪ್ರಗತಿ ಆಗುತ್ತದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next