Advertisement
ಎರಡು ವರ್ಷದಿಂದ ಇಲ್ಲಿ ವಾಹನಗಳು ಕತ್ತಲಲ್ಲಿ ಸಂಚಾರ ಮಾಡುತ್ತಿದೆಯಾದರೂ ವಾಹನ ಚಾಲಕರು, ಜನರು ತಮ್ಮ ಸಮಸ್ಯೆ ಹೇಳದೇ ಸುಮ್ಮನಿರುವುದು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳದಿರುವುದು ಒಂದು ಕಾರಣವಾಗುತ್ತಿದೆ.
Related Articles
ಕತ್ತಲಾದ ಮೇಲೆ ಕಗ್ಗತ್ತಲ್ಲಂತೆ ಕಾಣುವ ಈ ಪ್ರದೇಶದಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುವವರಿಗೆ ವಾಹನಗಳು ಸಮೀಪದ ಬಂದರೂ ಗೊತ್ತಾಗುತ್ತಿಲ್ಲ. ಸಂಜೆಯ ಬಳಿಕ ಮಹಿಳೆಯರು ನಡೆದುಕೊಂಡು ಹೋಗುವುದು ಸುರಕ್ಷಿತವಲ್ಲ. ಹಾಗಾಗಿ ಕೆಲಸಕ್ಕೆ ಹೋಗುವ ಮಹಿಳೆಯರನ್ನು ಕರೆದುಕೊಂಡು ಬರಲು ಮನೆಯವರು ಬರಬೇಕಾದ ಪರಿಸ್ಥಿತಿ ಇದೆ.
Advertisement
ಸಂಜೆ 5ಗಂಟೆಯೊಳಗೆ ವ್ಯವಸ್ಥೆಸಮಸ್ಯೆ ಗಮನಕ್ಕೆ ಬಂದಿರಲಿಲ್ಲ. ಬುಧವಾರ ಸಂಜೆ 5ಗಂಟೆಯೊಳಗೆ ದಾರಿದೀಪವನ್ನು ಸರಿಪಡಿಸುವ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು.
-ಆನಂದ ಸಿ. ಕಲ್ಲೋಳಿಕರ್, ಪೌರಾಯುಕ್ತರು ಉಡುಪಿ ನಗರಸಭೆ ಜವಾಬ್ದಾರಿ ಕಾಣುತ್ತಿಲ್ಲ
ಈ ಪ್ರದೇಶದಲ್ಲಿ ದಾರಿದೀಪ ಉರಿಯದ ಕಾರಣ ಇಲ್ಲಿ ಕದ್ದು ಮುಚ್ಚಿ ಕಸ ತಂದು ಎಸೆಯುವವರಿಗೆ ಸುಲಭವಾಗಿದೆ. ಕತ್ತಲಾದರೆ ಹೆಣ್ಣು ಮಕ್ಕಳು ಈ ದಾರಿಯಲ್ಲಿ ನಡೆಯಲು ಭಯ ಪಡುತ್ತಾರೆ. ನಗರಸಭೆಗಾಗಲಿ, ಮೆಸ್ಕಾಂ ಇಲಾಖೆಗಾಗಲಿ ಕಿಂಚಿತ್ತು ಜವಾಬ್ದಾರಿ ಇರುವಂತೆ ಕಾಣುತ್ತಿಲ್ಲ.
-ಹರೀಶ್ ಕೆ. ಗೋಳಿದಡಿ ಕೊಡವೂರು,ಸ್ಥಳೀಯರು