Advertisement

ಟ್ರಾಲಿ ಬ್ಯಾಗ್‌ನಲ್ಲಿ ಯುವತಿ ಶವ; ಇದೊಂದು ಮರ್ಯಾದಾ ಹತ್ಯೆ ಎಂದ ಪೊಲೀಸರು

04:54 PM Nov 21, 2022 | Team Udayavani |

ನವದೆಹಲಿ : ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯ ಬದಿಯಲ್ಲಿ ಸೂಟ್ ಕೇಸ್ ನಲ್ಲಿ ಯುವತಿಯ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೊಂದು ಮರ್ಯಾದಾ ಹತ್ಯೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಟ್ರಾಲಿ ಬ್ಯಾಗ್‌ನಲ್ಲಿ ಶವವಾಗಿ ಪತ್ತೆಯಾದ ದೆಹಲಿಯ ನಿವಾಸಿ 21 ವರ್ಷದ ಆಯುಷಿ ಯಾದವ್ ಳನ್ನು ಆಕೆಯ ತಂದೆಯೇ ಕೊಂದಿದ್ದಾನೆ ಎನ್ನಲಾಗಿದ್ದು, ಆಕೆ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ತಂದೆ ನಿತೇಶ್ ಯಾದವ್ ಪೊಲೀಸ್ ವಶದಲ್ಲಿದ್ದು, ಕೃತ್ಯಕ್ಕೆ ಬಳಸಿಕೊಳ್ಳಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಯುಷಿ ಯಾದವ್ ತಮಗೆ ತಿಳಿಸದೆ ಕೆಲವು ದಿನಗಳಿಂದ ಹೊರಗೆ ಹೋಗಿದ್ದಳು ಮತ್ತು ಇದು ಆಕೆಯ ತಂದೆಯನ್ನು ಕೆರಳಿಸಿತು. ನವೆಂಬರ್ 17 ರಂದು ಆಕೆ ಹಿಂದಿರುಗಿದಾಗ, ಬದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮೋಡ್‌ಬಂದ್ ಗ್ರಾಮದ ಅವರ ಮನೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಅದೇ ರಾತ್ರಿ ಆಕೆಯ ದೇಹವನ್ನು ಟ್ರಾಲಿಯಲ್ಲಿ ತುಂಬಿ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ರಾಯ ಕಟ್ ಬಳಿ ಎಸೆದ ಎಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಆಯುಷಿ ಯಾದವ್ ಅವರ ತಾಯಿ ಮತ್ತು ಸಹೋದರನಿಗೆ ಆಕೆಯ ತಂದೆಯೇ ಆಕೆಯನ್ನು ಕೊಂದಿದ್ದಾರೆ ಎಂದು ತಿಳಿದಿತ್ತು ಎಂದು ಹಂಗಾಮಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಇಲ್ಲಿ ಟ್ರಾಲಿಯನ್ನು ವಶಪಡಿಸಿಕೊಂಡ ನಂತರ, ಅವರು ಫೋನ್‌ಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು, ಸಾಮಾಜಿಕ ಮಾಧ್ಯಮವನ್ನು ಬಳಸಿದರು ಮತ್ತು ಗುರುತಿಸಲು ದೆಹಲಿಯಲ್ಲಿ ಪೋಸ್ಟರ್‌ಗಳನ್ನು ಸಹ ಹಾಕಿದರು.ಆದಾಗ್ಯೂ, ಆಕೆಯ ಬಗ್ಗೆ ಖಚಿತವಾದ ಮಾಹಿತಿಯು ಭಾನುವಾರ ಬೆಳಗ್ಗೆ ಅಪರಿಚಿತ ಕರೆ ಸ್ವೀಕರಿಸಲ್ಪಟ್ಟಿದ್ದು, ಆಕೆಯ ತಾಯಿ ಮತ್ತು ಸಹೋದರ ಅವಳನ್ನು ಛಾಯಾಚಿತ್ರಗಳ ಮೂಲಕ ಗುರುತಿಸಿದ್ದಾರೆ. ಅವರು ಇಲ್ಲಿನ ಶವಾಗಾರಕ್ಕೆ ಆಗಮಿಸಿ ಶವ ಆಯುಷಿ ಯಾದವ್ ಅವರದ್ದೇ ಎಂದು ದೃಢಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕುಟುಂಬವು ಉತ್ತರ ಪ್ರದೇಶದ ಗೋರಖ್‌ಪುರದ ಬಲುನಿ ಮೂಲದವರಾಗಿದ್ದು, ನಿತೇಶ್ ಯಾದವ್ ಅಲ್ಲಿ ಕೆಲಸ ಕಂಡುಕೊಂಡ ನಂತರ ರಾಷ್ಟ್ರ ರಾಜಧಾನಿಗೆ ವಲಸೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next