Advertisement

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

11:18 PM Jul 04, 2024 | Team Udayavani |

ಕಾಸರಗೋಡು: ಹೊಸದುರ್ಗ ಬಳಿಯ ಕ್ವಾಟ್ರಸ್‌ನಲ್ಲಿ ಸಾವಿಗೀಡಾದ ಮೂಲತಃ ಚೆಂಗಳ ನೆಲ್ಲಿಕಟ್ಟೆ ನಿವಾಸಿ ಫಾತಿಮತ್‌ ಸುಹರಾ (42) ಅವರನ್ನು ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಫಾತಿಮತ್‌ ಮೃತದೇಹವು ಜುಲೈ 2ರಂದು ಹೊಸದುರ್ಗ ನಾರ್ತ್‌ ಕೋಟಚ್ಚೇರಿಯ ತುಳುಚ್ಚೇರಿ ರಸ್ತೆಯ ಅವಿಯಿಲ್‌ ಅಪಾರ್ಟಮೆಂಟ್‌ನ ಕೊಠಡಿಯ ಒಳಗೆ ಸೋಫಾದ ಅಡಿಭಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವಕ್ಕೆ ವಸ್ತ್ರವನ್ನು ಹೊದೆಸಲಾಗಿತ್ತು. ಸ್ಥಳದಲ್ಲಿ ರಕ್ತ ಹೆಪ್ಪು ಗಟ್ಟಿತ್ತು. ಮನೆಗೆ ಹೊರಗಿನಿಂದ ಬೀಗ ಜಡಿಯಲಾಗಿತ್ತು. 3 ದಿನಗಳ ಹಿಂದೆ ಸಾವನ್ನಪ್ಪಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಫಾತಿಮತ್‌ ಜತೆಗೆ ವಾಸಿಸುತ್ತಿದ್ದ ಆಕೆಯ ಪ್ರಿಯತಮನೆಂದು ಹೇಳಲಾಗುತ್ತಿರುವ ಚೆಂಗಳ ರಹಮ್ಮತ್‌ ನಗರದ ಕನಿಯಡ್ಕ ಹೌಸ್‌ನ ಅಸೈನಾರ್‌ (33) ಜುಲೈ 1ರಂದು ಕಾಸರಗೋಡು ಬಸ್‌ ನಿಲ್ದಾಣ ಪರಿಸರದ ವಸತಿಗೃಹವೊಂದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನೇ ಸುಹರಾಳನ್ನು ಕೊಲೆಗೈದು ನಗರಕ್ಕೆ ಬಂದು ನೇಣಿಗೆ ಶರಣಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next