Advertisement
ನ್ಯೂಗುರಪ್ಪನಪಾಳ್ಯ ನಿವಾಸಿ ಖತೀಜಾ ಉಲ್ಲಾ (30) ಮೃತ ಗೃಹಿಣಿ. ಈ ಸಂಬಂಧ ಅವರ ಪತಿ ಮೆಹಬೂಬ್ ಷರೀಫ್ ಹಾಗೂ ಇತರರ ವಿರುದ್ಧ ಕಿರುಕುಳದಿಂದ ಮಗಳು ಮೃತಪಟ್ಟಿರುವುದಾಗಿ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಖತೀಜಾ ಹಾಗೂ ಮೆಹಬೂಬ್ ಷರೀಫ್ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿ ನಾಲ್ವರು ಮಕ್ಕಳಿದ್ದಾರೆ. ಪತಿ ಹಾಗೂ ಇತರರು, ನಿತ್ಯವೂ ಖತೀಜಾಗೆ ಕಿರುಕುಳ ನೀಡುತ್ತಿದ್ದರು. ಅದರಿಂದ ಬೇಸತ್ತ ಖತೀಜಾ ಪೋಷಕರಿಗೆ ದೂರು ನೀಡಿದ್ದರು. ಆಗ ಪೋಷಕರು ಅಳಿಯನಿಗೆ ಬುದ್ಧಿ ಹೇಳಿ ರಾಜಿಸಂಧಾನ ಮಾಡಿದ್ದರು ಎಂದು ಹೇಳಲಾಗಿದೆ.
Advertisement
ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣು: ದೂರು
01:58 PM Nov 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.