Advertisement

ಕಾರ್ಕಳ: ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕ ಮಹಿಳೆ ಸಾವು

07:53 PM Oct 01, 2022 | Team Udayavani |

ಕಾರ್ಕಳ: ಕಾರ್ಕಳ ತಾಲೂಕು ಸೂಡ ಗ್ರಾಮದ ಗಾಣದ ಬೆಟ್ಟು  ಎಂಬಲ್ಲಿ  ಮಹಿಳಾ ಕಾರ್ಮಿಕ ಸುಗುಣ (58) ಎಂಬವರು ಕೃಷಿ  ಹೊಂಡಕ್ಕೆ  ಬಿದ್ದು  ನೀರಿನಲ್ಲಿ  ಮುಳುಗಿ ಮೃತಪಟ್ಟ ಘಟನೆ  ಸೆ.30ರಂದು ನಡೆದಿದೆ.

Advertisement

ಅವರು ಮನೆಯ ಪಕ್ಕದ ಸುನೀಲ್‌ ಎಂಬುವವರ  ಭತ್ತದ ಗದ್ದೆಯಲ್ಲಿ   ಭತ್ತದ ಕಳೆ ತೆಗೆಯುವ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮಾಡಲೆಂದು ಮನೆಗೆ ಬರುವಾಗ ಮನೆಯ ಪಕ್ಕ ನೀರು ತುಂಬಿರುವ  ಕೃಷಿಗಾಗಿ ಮಾಡಿದ ಹೊಂಡದಲ್ಲಿ ಕೈ-ಕಾಲು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮುಳುಗಿ ಮೃತ ಪಟ್ಟಿರುತ್ತಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ .

Advertisement

Udayavani is now on Telegram. Click here to join our channel and stay updated with the latest news.

Next