Advertisement

ವಿಕೃತನ ಅಟ್ಟಹಾಸಕ್ಕೆ ಉಪನ್ಯಾಸಕಿ ಸಾವು

09:42 AM Feb 11, 2020 | Hari Prasad |

ನಾಗ್ಪುರ: ವಿಕೃತನೊಬ್ಬನ ಅಟ್ಟಹಾಸಕ್ಕೆ ಬೆಂದು ಹೋಗಿ, ಕಳೆದೊಂದು ವಾರದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ 25 ವರ್ಷದ ಉಪನ್ಯಾಸಕಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.

Advertisement

ಫೆ.3ರಂದು ಮಹಾರಾಷ್ಟ್ರದ ವರ್ದಾ ಜಿಲ್ಲೆಯಲ್ಲಿ ವಿಕಾಸ್‌ ನಾಗ್ರಾಲೆ (27) ಎಂಬಾತ ಉಪನ್ಯಾಸಕಿ ಅಂಕಿತಾ ಪಿಸುಡ್ಡೆಗೆ ಬೆಂಕಿ ಹಚ್ಚಿದ್ದ. ವಿಕಾಸ್‌ನ ವರ್ತನೆ ಸರಿಯಿಲ್ಲದ್ದರಿಂದ ಬೇಸತ್ತ ಅಂಕಿತಾ, ಆತನಿಂದ ದೂರವಾಗಿದ್ದಳು. ಇದೇ ಕಾರಣಕ್ಕಾಗಿ, ಸೇಡು ತೀರಿಸಿಕೊಳ್ಳಲು ವಿಕಾಸ್‌ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next