Advertisement

ಮೂವರು ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ

09:10 AM Aug 22, 2019 | Hari Prasad |

ರಾಯಚೂರು: ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಕೃಷ್ಣಾ ಬಲದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿರಿವಾರ ಸಮೀಪ ನಡೆದಿದೆ.

Advertisement

ನಸೀಮಾ ಅತ್ತನೂರು ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಗಂಡನ ಮನೆಯಲ್ಲಿ ಕಿರುಕಿಳ ತಾಳಲಾರದೆ ನಸೀಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಆಸ್ಪತ್ರೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ನಸೀಮಾ ಅಚರು ಸಿರವಾರಕ್ಕೆ ತೆರಳಿದ್ದರು. ಬಳಿಕ ಸಮೀಪದಲ್ಲಿದ್ದ ಕೃಷ್ಣಾ ಬಲದಂಡೆ ಕಾಲುವೆಗೆ ಬಂದು ಅಲ್ಲಿ ಮಕ್ಕಳೊಂದಿಗೆ ನೀರಿಗೆ ಹಾರಿದ್ದಾರೆ.

ನಸೀಮಾ (28) ಮತ್ತು ಆಕೆಯ ಮಕ್ಕಳಾದ ಮಹ್ಮದ್ ಅನೀಫ್( 5), ಐಯಾನ್ (3) ಹಾಗೂ ರೀಗಾನ್ (1) ಮೃತದೇಹಗಳು ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯಲ್ಲಿ ಕಾಲುವೆಯಲ್ಲಿ ಮಂಗಳವಾರ ಸಂಜೆ ದೊರೆತಿವೆ. ಘಟನೆಯ ಕುರಿತಾಗಿ  ನಸೀಮಾ ಸಹೋದರ ನೀಡಿದ ದೂರಿನ ಮೇರೆಗೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next