Advertisement

ಸೊರಬ: ಪ್ರೀತಿಸಿದವನನ್ನೇ ಮದುವೆಯಾದಳು; 5 ವರ್ಷದ ಬಳಿಕ ಮಗುವಿನೊಂದಿಗೆ ನೇಣಿಗೆ ಶರಣಾದಳು

07:50 PM Jul 16, 2022 | Team Udayavani |

ಸೊರಬ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಗ್ರಾಮದ ನಯನಾ (27) ಹಾಗೂ ಗುರು (4) ಆತ್ಮಹತ್ಯೆಗೆ ಶರಣಾಗಿರುವ ದುರ್ಧೈವಿಗಳು.

ಸುಮಾರು 5 ವರ್ಷಗಳ ಹಿಂದೆ ಕುಂಬತ್ತಿ ಗ್ರಾಮದ ನಯನಾ ಹಾಗೂ ಕಪ್ಪಗಳಲೆ ಗ್ರಾಮದ ಶರತ್ ಪ್ರೀತಿಸಿ ವಿವಾಹವಾಗಿದ್ದರು. ಮಗಳು ಮತ್ತು ಮೊಮ್ಮಗನ ಸಾವಿಗೆ ನಯನಾ ಪತಿ ಶರತ್, ಮಾವ ಹಾಲೇಶ್ ಹಾಗೂ ಅತ್ತೆ ಸೀತಮ್ಮ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ನಾಗರಾಜ್ ಸಲ್ಲಿಸಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next