Advertisement

ಪರಿಹಾರ ಕೇಂದ್ರದಲ್ಲಿ ಮಹಿಳೆ ಸಾವು

11:12 PM Aug 19, 2019 | Team Udayavani |

ರಾಮದುರ್ಗ: ಪರಿಹಾರ ಕೇಂದ್ರದಲ್ಲಿದ್ದ ಮಹಿಳೆಯೊಬ್ಬರು, ಜ್ವರ, ಅತಿಸಾರ ಭೇದಿ ಯಿಂದ ಸಾವಿಗೀಡಾಗಿರುವ ಘಟನೆ ಸೋಮವಾರ ನಡೆದಿದೆ. ದೊಡಮಂಗಡಿ ಗ್ರಾಮದ ಮಹಾದೇವಿ ತಿಮ್ಮಣ್ಣ ಮಲ್ಲಾಡಿ (30) ಮೃತರು. ಅ.8 ರಂದು ಮಲಪ್ರಭಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ದೊಡಮಂಗಡಿ ಗ್ರಾಮಸ್ಥರನ್ನು ಪಟ್ಟಣ ಹೊರವಲಯದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಪರಿಹಾರ ಕೇಂದ್ರದಲ್ಲಿರಲು ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

ಆದರೆ ಪರಿಹಾರ ಕೇಂದ್ರದಲ್ಲಿ ಮಹಿಳೆಗೆ ಅ.18 ರಂದು ಜ್ವರ, ಅತಿಸಾರ ಭೇದಿ ಉಂಟಾದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next