Advertisement

ಕೃಷ್ಣಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ; ರಕ್ಷಿಸಲು ಯತ್ನಿಸಿದ ಮೀನುಗಾರರು

09:49 PM Nov 14, 2022 | Vishnudas Patil |

ವಿಜಯಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ.

Advertisement

ಹೆಗ್ಗೂರು ಮೂಲದ ಕೊಲ್ಹಾರ ತಾಲೂಕ ಮಟ್ಟಿಹಾಳ ನಿವಾಸಿ ಶಾಂತವ್ವ ಬಸಪ್ಪ ಜಂಬಗಿ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.

ಶಾಂತವ್ವ ಕಳೆದ ಹಲವು ವರ್ಷಗಳಿಂದ ದೈಹಿಕವಾಗಿ ಅನಾರೋಗ್ಯ ಪೀಡಿತಳಾಗಿದ್ದಳು. ಹಲವು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ರೋಗ ವಾಸಿ ಆಗಿರಲಿಲ್ಲ. ಇದರಿಂದಾಗಿ ಮಾನಸಿಕವಾಗಿ ಬಳಲುತ್ತಿದ್ದ ಶಾಂತವ್ವ ಸೋಮವಾರ ಬೆಳಗ್ಗೆಯಿಂದ ಮನೆಯಿಂದ ನಾಪತ್ತೆ ಆಗಿದ್ದಳು. ಕುಟುಂಬ ಸದಸ್ಯರು ಹಲವು ಕಡೆಗಳಲ್ಲಿ ಹುಡುಕಿದ್ದರು.

ಆದರೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊಲ್ಹಾರ ಬಳಿ ಕೃಷ್ಣಾ ನದಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿದ್ದಾಳೆ. ನದಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮಹಿಳೆ ನದಿಗೆ ಹಾರಿದ್ದನ್ನು ಗಮನಿಸಿದ ಮೀನುಗಾರರು ಕೂಡಲೇ ಸೇತುವೆ ಬಳಿಗೆ ಈಜುತ್ತಾ ಧಾವಿಸಿದ್ದಾರೆ.
ಆದರೆ ಮೀನುಗಾರರು ರಕ್ಷಣೆಗೆ ಧಾವಿಸುವ ವೇಳೆಗೆ ಶಾಂತವ್ವಳ ಪ್ರಾಣ ಹೋಗಿತ್ತು.

ಮೀನುಗಾರರಿಂದ ವಿಷಯ ತಿಳಿದ ಕೊಲ್ಹಾರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದ್ದಾರೆ. ಕೊಲ್ಹಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next